ಉಜಿರೆ: ಗ್ರಾಮದ ಓಡಲ ಚಾಮುಂಡಿ ನಗರದ ಶ್ರೀ ವ್ಯಾಘ್ರಚಾಮುಂಡಿ ದೈವಸ್ಥಾನದ ಪ್ರತಿಷ್ಠಾ ವರ್ಧಂತ್ಯುತ್ಸವದ ಎ. 29ರಂದು ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆಯನ್ನು ಕ್ಷೇತ್ರದ ಪ್ರಧಾನ ಅರ್ಚಕ ವೇ.ಬ್ರ. ರಾಜಗೋಪಾಲ ಯಡಪಡಿತ್ತಾಯ ಮಾ. 14ರಂದು ದೈವಸ್ಥಾನದಲ್ಲಿ ಸಂಕ್ರಮಣ ವಿಶೇಷ ಪೂಜಾ ಸಂದರ್ಭದಲ್ಲಿ ಬಿಡುಗಡೆಗೊಳಿಸಿದರು.
ಶ್ರೀ ವ್ಯಾಘ್ರಚಾಮುಂಡಿ ಸೇವಾ ಟ್ರಸ್ಟ್ ನ ಅಧ್ಯಕ್ಷ ಸೀತಾರಾಮ ಶೆಟ್ಟಿ ಕೆಂಬರ್ಜೆ, ಟ್ರಸ್ಟ್ ಸದಸ್ಯರು, ಭಕ್ತರು, ಊರವರು ಹಾಜರಿದ್ದರು.