ಬೆಳಾಲು ಸಹಕಾರ ಸಂಘದಿಂದ ವೈದ್ಯಕೀಯ ನೆರವು ಹಸ್ತಾಂತರ: 3 ಮಂದಿ ಸದಸ್ಯರಿಗೆ ತಲಾ ರೂ. 25 ಸಾವಿರ ವಿತರಣೆ

0

ಬೆಳಾಲು: ಪ್ರಾ. ಕೃ. ಪ. ಸ. ಸಂಘದ ವತಿಯಿಂದ ಸದಸ್ಯರ ಕಲ್ಯಾಣ ನಿಧಿಯಿಂದ 3 ಮಂದಿ ಸದಸ್ಯರಿಗೆ ತಲಾ ರೂ.25000/- ವೈದ್ಯಕಿಯ ನೆರವು ಫೆ. 28ರಂದು ಸಂಘದ ಅಧ್ಯಕ್ಷ ಹೆಚ್. ಪದ್ಮ ಗೌಡ ಪಲಾನುಭವಿಗಳಾದ ಆಂಟನಿ ಟಿ.ವಿ. ನಾಯರ್ಕಂಡ, ಗಂಗಾಧರ ಗೌಡ ಮನಿಕ್ಕಳ. ಡೀಕಯ ಗೌಡ ಕುಕ್ಕೊಟ್ಟು ಇವರಿಗೆ ಚೆಕ್ ವಿತರಿಸಿದರು.

ಸಂಘದ ಉಪಾಧ್ಯಕ್ಷ ದಿನೇಶ್ ಕೋಟ್ಯಾನ್, ನಿರ್ದೇಶಕರುಗಳಾದ ಸುರೇಂದ್ರ ಗೌಡ, ದಾಮೋದರ ಗೌಡ ಸುರುಳಿ, ರಮೇಶ್ ಗೌಡ, ಶೇಖರ ಗೌಡ ಕೊಲ್ಲಿಮಾರು, ರಾಜಪ್ಪ ಗೌಡ, ಸೀತಾರಾಮ ಬಿ. ಎಸ್., ಚೀಂಕ್ರ, ಹೇಮಾ ಮೋಹನ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನಾರಾಯಣ ಗೌಡ, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here