ಧರ್ಮಸ್ಥಳದಿಂದ ವೇಣೂರು ಸ. ಪ. ಪೂ. ಕಾಲೇಜು, ಪ್ರೌಢಶಾಲಾ ವಿಭಾಗಕ್ಕೆ 1 ಲಕ್ಷ ರೂ. ನೆರವು

0

ವೇಣೂರು: ಪ್ರೌಢ ಶಾಲೆಯ ಕಟ್ಟಡ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ವೀರೇಂದ್ರ ಹೆಗ್ಗಡೆಯವರು ಮಂಜೂರು ಮಾಡಿದ ರೂ.1 ಲಕ್ಷ ಅನುದಾನ ನೀಡಿದ್ದಾರೆ.

ಮಂಜೂರಾತಿ ಪತ್ರವನ್ನು ತಾಲೂಕು ಯೋಜನಾಧಿಕಾರಿ ದಯಾನಂದ, ವಲಯ ಮೇಲ್ವಿಚಾರಕಿ ಶಾಲಿನಿ, ತಾಲೂಕು ಜನಜಾಗೃತಿ ವೇದಿಕೆಯ ಕೋಶಾಧಿಕಾರಿ ಗಿರೀಶ್ ಕೆ. ಎಸ್. ಶಾಲಾ ಸಮಿತಿಯವರಿಗೆ ವಿತರಿಸಿದರು.

ಉಪಪ್ರಾಂಶುಪಾಲ ವೆಂಕಟೇಶ್ ಎಸ್. ತುಳುಪುಳೆ, ಎಸ್. ಡಿ . ಎಂ. ಸಿ. ಅಧ್ಯಕ್ಷ ರಾಜೇಶ್ ಮೂಡುಕೋಡಿ, ನೆಲ್ಸನ್ ಹೆರಾಲ್ಡ್, ಸುಕನ್ಯಾ ಪ್ರಭು, ಜ್ಯೋತಿ ಜೂಲಿಯೆಟ್ ಡಿ’ಸೋಜ, ಸಂಧ್ಯಾ ಜೈನ್, ಸುಶೀಲಾ, ಪ್ರೇಮಾ ಕೆ., ಅನುಸೂಯ ಫಾಟಕ್, ಸಂಧ್ಯಾ, ಲೋಕಯ್ಯ ಎಸ್. ಹಾಗೂ ಮಂಜುನಾಥ, ವೇಣೂರು ಎ. ಮತ್ತು ಬಿ. ಒಕ್ಕೂಟದ ಅಧ್ಯಕ್ಷ ಪದ್ಮಪ್ಪ ಹಾಗೂ ಸುಚಿತ್ರ ಹೆಗ್ಡೆ, ಉಪಾಧ್ಯಕ್ಷ ಹರಿಪ್ರಸಾದ್, ಸೇವಾಪ್ರತಿನಿಧಿ ಜಯಂತಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here