ಶಿಶಿಲ: ಕುಣಿತ ಭಜನಾ ಸಪ್ತಾಹ ಸಮಾರೋಪ

0

ಶಿಶಿಲ: ಶ್ರೀ ಚಾಮುಂಡೇಶ್ವರಿ ದೇವಿ ದೇವಾಲಯದ ನವರಾತ್ರಿ ಮಹೋತ್ಸವದ ಸಂದರ್ಭದಲ್ಲಿ ಶ್ರೀ ಶ್ರೀನಿವಾಸ ಇಂದಬೆಟ್ಟು ಸ್ಮರಣಾರ್ಥ ಕುಣಿತ ಭಜನಾ ಸಪ್ತಾಹ ಅ.4 ರಂದು ಪ್ರಾರಂಭಗೊಂಡು ಅ.10 ರಂದು ಸಮಾರೋಪಗೊಂಡಿತು.

ಅರಸಿನಮಕ್ಕಿ ಹೊಸ್ತೋಟ ಶ್ರೀ ಸಿದ್ದಿವಿನಾಯಕ ಭಜನಾ ಮಂಡಳಿ, ನೆಲ್ಯಾಡಿ ಹಾರ್ಪಳ ಶ್ರೀ ಶಾಸ್ತಾರ ಭಜನಾ ಮಂಡಳಿ, ಶಿಶಿಲ ಶ್ರೀ ಶಿಶಿಲೇಶ್ವರ ಹಿರಿಯರ ಭಜನಾಮಂಡಳಿ, ಕೊಕ್ಕಡ ಶ್ರೀ ವೈದ್ಯನಾಥೇಶ್ವರ ಭಜನಾ ಮಂಡಳಿ, ಪಾಲೆಂಜ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ , ಅರಿಕೆಗುಡ್ಡೆ ಶ್ರೀ ವನದುರ್ಗಾ ಭಜನಾ ಮಂಡಳಿ, ಶಿಬಾಜೆ ಮೊಂಟೆತಡ್ಕ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ, ಶಿಶಿಲ ಶ್ರೀ ಮತ್ಸ್ಯ ಶಿವದುರ್ಗಾ ಮಹಿಳಾ ಭಜನಾ ಮಂಡಳಿ ಭಜನಾ ತಂಡಗಳು ಭಜನಾ ಕಾರ್ಯಕ್ರಮ ನಡೆಸಿಕೊಟ್ಟಿದ್ದು ದೀಪ ಮಂಗಳ ಎನ್ನುವ ವಿನೂತನ ಕಾರ್ಯಕ್ರಮದೊಂದಿಗೆ ಭಜನಾ ಸಪ್ತಾಹ ಸಮಾರೋಪಗೊಂಡಿತು.

LEAVE A REPLY

Please enter your comment!
Please enter your name here