ಬೆಳ್ತಂಗಡಿ: ಮಿನಿ ಲಾರಿ ಮತ್ತು ಬೈಕ್ ನಡುವೆ ಭೀಕರ ಅಪಘಾತ: ಬೈಕಿನಲ್ಲಿದ್ದ ನಾಲ್ವರು ಮೃತ್ಯು

0

ಬೆಳ್ತಂಗಡಿ: ಕಾರ್ಕಳ ತಾಲೂಕಿನ ನಲ್ಲೂರು ಪಾಜೆಗುಡ್ಡೆ ಬಳಿ ಬೈಕ್ ಮತ್ತು ಗೂಡ್ಸ್ ವಾಹನದ ನಡುವೆ ಅಪಘಾತ ಸಂಭವಿಸಿದ್ದು, ಬೈಕ್ ನಲ್ಲಿದ್ದ 5 ಜನರಲ್ಲಿ ಮೂರು ಮಕ್ಕಳನ್ನು ಸೇರಿ, 4 ಮಂದಿ ಮೃತಪಟ್ಟ ಹೃದಯ ವಿದ್ರಾವಕ ಘಟನೆ ವರದಿ ಆಗಿದೆ.

ಬೈಕ್ ನಲ್ಲಿ ಪತಿ, ಪತ್ನಿ ಹಾಗೂ 3 ಮಕ್ಕಳು ಬರುತ್ತಿದ್ದಾಗ ಪಾಜೇಗುಡ್ಡೆ ಬಳಿ ಗೂಡ್ಸ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಬೈಕ್ ನಲ್ಲಿ ಸುರೇಶ್ ಆಚಾರ್ಯ (36 ವರ್ಷ), ಮೀನಾಕ್ಷಿ ಹೆಂಡತಿ (32 ವರ್ಷ) ಸುಮಿಕ್ಷಾ ಮಗಳು (7 ವರ್ಷ), ಸುಶ್ಮಿತಾ(5 ವರ್ಷ) ಸುಶಾಂತ್ (2 ವರ್ಷ) ಸವಾರರಿದ್ದು, ಪತ್ನಿಯನ್ನು ಹೊರತುಪಡಿಸಿ ಉಳಿದೆಲ್ಲರೂ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಮೃತ ಪಟ್ಟವರು ವೇಣೂರು ಗಾಂಧಿ ನಗರದವರು ಎನ್ನಲಾಗಿದೆ.

LEAVE A REPLY

Please enter your comment!
Please enter your name here