ವೇಣೂರು: ಆರಕ್ಷಕ ಠಾಣೆಯಲ್ಲಿ ಮಿಲಾದುನ್ನೆಭಿ ಪ್ರಯುಕ್ತ ಶಾಂತಿ ಸಭೆ

0

ವೇಣೂರು: ಇಲ್ಲಿನ ಆರಕ್ಷಕ ಠಾಣೆಯಲ್ಲಿ ಮುಸ್ಲಿಮರ ಹಬ್ಬ ಮಿಲಾದುನ್ನೆಭಿ ಪ್ರಯುಕ್ತ ಶಾಂತಿ ಸಭೆಯು ಆರಕ್ಷಕ ಉಪನಿರೀಕ್ಷಕ ಶೈಲಾ ಮುರಗೋಡ್ ಅಧ್ಯಕ್ಷತೆಯಲ್ಲಿ ನಡೆಯಿತು.

ವೇಣೂರು ಠಾಣಾ ವ್ಯಾಪ್ತಿಯ ಮಸೀದಿ ಅಧ್ಯಕ್ಷ – ಕಾರ್ಯದರ್ಶಿಗಳು ಭಾಗವಹಿಸಿದ್ದರು.ಉಪನಿರೀಕ್ಷರು ಮಾತಾಡಿ ಕಾನೂನು ಮತ್ತು ಸುವ್ಯವಸ್ಥೆಗೆ ಸಮುದಾಯ ಮುಖಂಡರ ಸಹಕಾರ ಕೋರಿದರು.

ಪಡ್ಡಂದಡ್ಕ ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಕೆ ಪೆರಿಂಜೆ, ಕಟ್ಟೆ ಮಸೀದಿ ಅಧ್ಯಕ್ಷ ನವಾಜ್, ವೇಣೂರಿನ ಹಮೀದ್, ಅಳದಂಗಡಿ ಅಸಿಫ್ ಯಾಕುಬ್, ಕಾಶಿಪಟ್ಣದ ಪುತ್ತುಮೋನು, ಪ್ರಮುಖರಾದ ಪತ್ರಕರ್ತ ಎಚ್.ಮಹಮ್ಮದ್ ವೇಣೂರು, ಖಾಲಿದ್ ಪುಲಬೆ, ಅಲಿಯಬ್ಬ ಪುಲಬೆ, ಅಶ್ರಫ್ ಶಾಂತಿನಗರ, ಅಲ್ತಾಫ್ ಆರಂಬೋಡಿ ಸೇರಿದಂತೆ ಮಸೀದಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಆರಕ್ಷಕ ಎಚ್.ಸಿ ಪಂಪಾವತಿ ವಂದಿಸಿದರು.

LEAVE A REPLY

Please enter your comment!
Please enter your name here