ಮುಂಡೂರು: ಬಳಂಜ ಮಂಡಲ ಪಂಚಾಯತ್‌, ಮೇಲಂತಬೆಟ್ಟು ಗ್ರಾ.ಪಂ. ಮಾಜಿ ಸದಸ್ಯ ಆನಂದ ಸಾಲಿಯಾನ್ ನಿಧನ

0

ಮುಂಡೂರು: ಶಿವಪ್ರಸಾದ್‌ ನಾನಿಲ್ತ್ಯಾರು ನಿವಾಸಿ, ಬಳಂಜ ಮಂಡಲ ಪಂಚಾಯತ್‌ ಮತ್ತು ಮೇಲಂತಬೆಟ್ಟು ಗ್ರಾ.ಪಂ.ಮಾಜಿ ಸದಸ್ಯ ಆನಂದ ಸಾಲಿಯಾನ್‌ (63ವ)ರವರು ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಚಿಕಿತ್ಸೆಗಾಗಿ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೆ.14ರಂದು ನಿಧನರಾಗಿದ್ದಾರೆ.

ಇವರು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಹಾಗೂ ಮುಂಡೂರು ಪರಿಸರದ ದೇವಸ್ಥಾನ, ದೈವಸ್ಥಾನ, ಯುವಕ ಮಂಡಲಗಳಲ್ಲಿ ಸಕ್ರೀಯವಾಗಿ ಗುರುತಿಸಿಕೊಂಡಿದ್ದರು.

ಮೃತರು ಪತ್ನಿ ಸುನೀತ, ಪುತ್ರಿ ಅಂಕಿತ, ಪುತ್ರ ಸರ್ವೇಶ್, ಹಾಗೂ ಸಹೋದರರು, ಸಹೋದರಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here