ಕಣಿಯೂರು: ಮಹಾತ್ಮ ಗಾಂಧೀಜಿ ನರೇಗಾ ಯೋಜನೆಯ ಸಾಮಾಜಿಕ ಪರಿಶೋಧನಾ ಗ್ರಾಮ ಸಭೆ

0

ಪದ್ಮುಂಜ: ಕಣಿಯೂರು ಗ್ರಾಮ ಪಂಚಾಯತ್ ನಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಸಾಮಾಜಿಕ ಪರಿಶೋಧನಾ ಗ್ರಾಮ ಸಭೆ ಪಂ.ಉಪಾಧ್ಯಕ್ಷೆ ಜಾನಕಿಯವರ ಅಧ್ಯಕ್ಷತೆಯಲ್ಲಿ ಜರಗಿತು.

ಬಿಸಿಎಂ ತಾಲೂಕು ಅಧಿಕಾರಿ ಜೋಸೆಫ್ ರವರು ನೋಡಲ್ ಅಧಿಕಾರಿಯಾಗಿ ಆಗಮಿಸಿ ಕಾರ್ಯಕ್ರಮ ನಡೆಸಿಕೊಟ್ಟರು.

ತಾಲೂಕು ವ್ಯವಸ್ಥಾಪಕಿ ಜಯಲಕ್ಷ್ಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಗ್ರಾಮ ಸಂಪನ್ಮೂಲ ವ್ಯಕ್ತಿಗಳಾದ ಲಾವಣ್ಯ, ಹರಿಣಿಯರವರು ನಿರ್ವಹಣೆಗೊಂಡ ಕಾಮಗಾರಿಗಳ ಪಟ್ಟಿ ಓದಿ ಹೇಳಿದರು.

ಕೆಲವು ಕಾಮಗಾರಿಗಳಲ್ಲಿ ನ್ಯೂನತೆಗಳು ಕಂಡು ಬಂದಿದ್ದು ಸರಿಪಡಿಸುವಂತೆ ನೋಡಲ್ ಅಧಿಕಾರಿಯವರು ಸೂಚಿಸಿದರು. ಮುಂದಿನ ದಿನಗಳಲ್ಲಿ ನ್ಯೂನತೆಗಳು ಬರದಂತೆ ಕಾಮಗಾರಿ ನಡೆಸಬೇಕೆಂದು ತಿಳಿಸಿದರು.

ಜಿ.ಪಂ ಇಂಜಿನಿಯರ್ ಗಫೂರ್, ಪ.ಪಂ ಸದಸ್ಯರಾದ ಗಾಯತ್ರಿ, ಜಲಜ, ಸುಮತಿ ಪದ್ಮುಂಜ, ಸುಮತಿ ಬೇಂಗಾಯಿ ಉಪಸ್ಥಿತರಿದ್ದರು.ಪಿಡಿಓ ಗೀತಾ ಆರ್ ಸಾಲಿಯಾನ್ ರವರು ಸ್ವಾಗತಿಸಿ, ಕಾರ್ಯದರ್ಶಿ ರಮೇಶ್ ಕೆ ಯವರು ಧನ್ಯವಾದ ಸಲ್ಲಿಸಿದರು.

LEAVE A REPLY

Please enter your comment!
Please enter your name here