ಕೊಕ್ಕಡ ಜೆಸಿಐ ಕಪಿಲಾ ಘಟಕದ ಜೆಸಿ ಸಪ್ತಾಹ-2024 ಉದ್ಘಾಟನೆ

0

ಕೊಕ್ಕಡ: ಜೆಸಿಐ ಕೊಕ್ಕಡ ಕಪಿಲಾ ಘಟಕದ ಜೆಸಿ ಸಪ್ತಾಹ 2024 ಉದ್ಘಾಟನಾ ಸಮಾರಂಭವು ಸೆಪ್ಟೆಂಬರ್ 9ರಂದು ಗ್ರಾಮಭ್ಯುದಯ ಕಾರ್ಯಕ್ರಮ ಅನುಷ್ಠಾನ ಸಮಿತಿಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು.ಉದ್ಘಾಟನೆಯನ್ನು ಗ್ರಾಮಪಂಚಾಯತ್ ಸದಸ್ಯರಾದ ಟಿಎಸ್ ನಿತ್ಯಾನಂದ ರೈ ಉದ್ಘಾಟಿಸಿದರು.

ಕಾರ್ಯಕ್ರಮದ ಸಂದರ್ಭದಲ್ಲಿ, ಜೆಸಿಐ ಕೊಕ್ಕಡ ಕಪಿಲಾ ಘಟಕದ ಪರವಾಗಿ ಟೇಬಲ್ ಅನ್ನು ಗ್ರಾಮಭ್ಯುದಯ ಕಾರ್ಯಕ್ರಮ ಅನುಷ್ಠಾನ ಸಮಿತಿಗೆ ಕೊಡುಗೆಯಾಗಿ ನೀಡಲಾಯಿತು.

ಮೂಲಭೂತ ಅಭಿವೃದ್ದಿ ಮತ್ತು ಸಮುದಾಯದ ಸೇರ್ಪಡೆಗೆ ತೀವ್ರ ಗಮನ ಹರಿಸುವ ಜೆಸಿ ಸಪ್ತಾಹವು, ಸಮುದಾಯದ ನಾಯಕರು ಮತ್ತು ಸದಸ್ಯರ ಸಕ್ರಿಯ ಹಾಜರಾತಿಯೊಂದಿಗೆ ಯಶಸ್ವಿಯಾಗಿ ಆರಂಭವಾಯಿತು.

ಈ ಸಂದರ್ಭದಲ್ಲಿ ಜೆ ಎಫ್ ಎಂ ಕೆ ಶ್ರೀಧರ್ ರಾವ್, ನಿಕಟ ಪೂರ್ವ ಅಧ್ಯಕ್ಷರಾದ ಸೆನಿಟರ್ ಜಿತೇಶ್ ಎಲ್ ಪಿರೇರ, ಜೋಸೆಫ್ ಪಿರೇರ, ರಾಜಾರಾಮ ಸಂಗಮ ನಗರ, ಅರಣ್ಯ ಸಮಿತಿ ಅಧ್ಯಕ್ಷ ಧನಂಜಯ ಗೌಡ, ಕಳೆಂಜ ಗ್ರಾಮ ಪಂಚಾಯತಿ ಸದಸ್ಯೆ ಪ್ರೇಮಾಬಿ.ಎಸ್, ವಿನೋದ್ ಗೌಡ, ಬಾಬು ಶೆಟ್ಟಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಜೆಸಿ ವಾಣಿ ಧನುಷ್ ಜೈನ್ ವಾಚಿಸಿದರು, ಉದ್ಘಾಟಕರ ಪರಿಚಯವನ್ನು ಪಿಟಿ ಸಬಾಸ್ಟಿನ್ ಅವರು ತಿಳಿಸಿದರು, ಜೈಸನ್ ಪಟ್ಟೇರಿಲ್ ಅನಿಸಿಕೆಯನ್ನು ವ್ಯಕ್ತಪಡಿಸಿದರು, ಸಂತೋಷ್ ಜೈನ್ ಸ್ವಾಗತಿಸಿ, ಅಕ್ಷತ್ ರೈ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here