ಬೆಳ್ತಂಗಡಿ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಮುಲ್ಕಿ ವಲಯ ಆಯೋಜಿಸಿದ ಜಿಲ್ಲಾ ಮಟ್ಟದ ಫೋಟೋ, ವೀಡಿಯೋ ಸ್ಪರ್ಧೆಯಲ್ಲಿ ಬೆಳ್ತಂಗಡಿ ವಲಯ ಪ್ರಥಮ

0

ಬೆಳ್ತಂಗಡಿ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ದ.ಕ, ಉಡುಪಿ ಜಿಲ್ಲೆ ಮೂಲ್ಕಿ ವಲಯ ವತಿಯಿಂದ ಆಯೋಜನೆ ಮಾಡಿದ ಜಿಲ್ಲಾ ಮಟ್ಟದ ಬೆನ್ನಿದ ನಿರೆಲ್ದ ಬಿರ್ದ್ ಇದರ ಛಾಯಾಚಿತ್ರ ಹಾಗೂ ವೀಡಿಯೋ ಸರ್ಧೆಯಲ್ಲಿ ಬೆಳ್ತಂಗಡಿ ವಲಯ ಭಾಗವಹಿಸಿ ವೀಡಿಯೋ ಸ್ಪರ್ಧೆಯಲ್ಲಿ ಪ್ರಥಮ ಸ್ಧಾನ ಪಡೆದುಕೊಂಡಿದೆ.

ಬಹುಮಾನ ವಿತರಣೆಯು ಆ.19ರಂದು ವಿಶ್ವ ಛಾಯಾಗ್ರಹಣ ದಿನದಂದು ಹಳೆಯಂಗಡಿ ಲೈಟ್ ಹೌಸ್ ತೋಕುರು ಗುತ್ತು ಮನೆಯಲ್ಲಿ ನಡೆಯಿತು.

ಈ ಸಂರ್ಭದಲ್ಲಿ ಸೌತ್ ಕೆನರಾ ಫೋಟೋಗ್ರಾಫರ್ಸ ಅಸೋಸಿಯೇಸನ್ ದ.ಕ, ಉಡುಪಿ ಜಿಲ್ಲೆ ಜಿಲ್ಲಾಧ್ಯಕ್ಷರಾದ ಪದ್ಮಪ್ರಸಾದ್ ಜೈನ್, ಉಪಾಧ್ಯಕ್ಷ ರಮೇಶ್ ಕಲಾಶ್ರೀ, ಪ್ರಧಾನ ಕಾರ್ಯದರ್ಶಿ ದಯಾನಂದ ಬಂಟ್ವಾಳ, ಮೂಲ್ಕಿ ವಲಯದ ಅಧ್ಯಕ್ಷ ಪ್ರಕಾಶ್ ಸುವರ್ಣ, ನವೀನ್ ಶೆಟ್ಟಿ ಎಡ್ಮೆಮಾರ್ ನಮ್ಮ ಟಿವಿ, ಶಕುಂತಳ ಜೆ ಶೆಟ್ಟಿ ತೋಕುರು ಗುತ್ತು ಮತ್ತಿತರರು ಉಪಸ್ಥಿತರಿದ್ದರು.

ಬೆಳ್ತಂಗಡಿ ವಲಯದ ಅಧ್ಯಕ್ಷೆ ಸಿಲ್ವಿಯಾ ಕೊರ್ಡೋರು ಮತ್ತು ಕಾರ್ಯದರ್ಶಿ ವಿಜಯ ಎಚ್ ಭಟ್ ಬಹುಮಾನ ಸ್ವೀಕರಿಸಿದರು.

LEAVE A REPLY

Please enter your comment!
Please enter your name here