ರಾಜಭವನವು ಬಿಜೆಪಿ ಕಚೇರಿಯಾಗಿ ಬದಲಾಗಿರುವುದಕ್ಕೆ ಸ್ಪಷ್ಟ ನಿದರ್ಶನವಿದು: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ

0

ಬೆಳ್ತಂಗಡಿ: ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ವಿರುದ್ಧ ವ್ಯಕ್ತಿ ಒಬ್ಬರು ಕೊಟ್ಟ ದೂರನ್ನು ಪರಾಮರ್ಶಿಸಲು ಸಮಯ ತೆಗೆದುಕೊಳ್ಳದೆ ರಾಜ್ಯಪಾಲರು ನೋಟಿಸ್ ಜಾರಿ ಮಾಡಿದ್ದರು.ಸರ್ಕಾರ ಕೊಟ್ಟ ನೂರಾರು ಪುಟಗಳ ವಿವರಣೆಯನ್ನು ಓದಿ, ಕಾನೂನು ತಜ್ಞರೊಂದಿಗೆ ಚಿಂತನೆ ನಡೆಸಲು ಸಮಯ ತೆಗೆದುಕೊಳ್ಳದೆ ರಾಜ್ಯಪಾಲರು ಮುಖ್ಯಮಂತ್ರಿಗಳ ತನಿಖೆಗೆ ಅನುಮತಿ ನೀಡಿದ್ದಾರೆ.ಈ ದೂರಿನಲ್ಲಿ ಸತ್ಯವಿದೆಯೇ, ಸುಳ್ಳಿದೆಯೇ ಎಂಬ ಪರಾಮರ್ಶೆ ಮಾಡದೆ ಎಲ್ಲವನ್ನೂ ತುರಾತುರಿಯಲ್ಲಿ ಮಾಡುತ್ತಿರುವ ರಾಜ್ಯಪಾಲರು ಯಾರ ನಿರ್ದೇಶನದ ಮೆರೆಗೆ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ.

LEAVE A REPLY

Please enter your comment!
Please enter your name here