ಕಳಿಯ: ಗ್ರಾಮ ಪಂಚಾಯತ್ ನಲ್ಲಿ ನ್ಯಾಯ ಸಮಿತಿ ಸಭೆ

0

ಕಳಿಯ: ಗ್ರಾಮ ಪಂಚಾಯತ್ ನಲ್ಲಿ ನ್ಯಾಯ ಸಮಿತಿ ಸಭೆಯು ಆ.7ರಂದು ನಡೆಯಿತು.

ಈ ಸಭೆಯಲ್ಲಿ ಕಳಿಯ ಗ್ರಾಮದ ಮುರ್ತಜೆ ಎಂಬಲ್ಲಿ ರಸ್ತೆ ಸಮಸ್ಯೆಯ ಬಗ್ಗೆ ಬಂದ ದೂರಿನ ಬಗ್ಗೆ, ದೂರುದಾರರನ್ನು ಮತ್ತು ಎದ್ರಿದಾರರನ್ನು ಪಂಚಾಯತ್ ಗೆ ಕರೆಯಿಸಿ ಚರ್ಚಿಸಿ ಸ್ಥಳಕ್ಕೆ ಬೇಟಿ ನೀಡಿ ಒಮ್ಮತದ ತೀರ್ಮಾನದಂತೆ ರಸ್ತೆ ಸಮಸ್ಯೆಯನ್ನು ಬಗೆಹರಿಸಲಾಯಿತು.

ಈ ಸಭೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿವಾಕರ ಎಂ, ನ್ಯಾಯ ಸಮಿತಿ ಅದ್ಯಕ್ಷೆ ಪುಷ್ಪಾ, ಅಭಿವೃದ್ಧಿ ಅಧಿಕಾರಿಗಳಾದ ಸಂತೋಷ್ ಪಾಟೀಲ್, ಸದಸ್ಯರಾದ ಸುದಾಕರ ಮಜಲು ಅಬ್ದುಲ್ ಕರೀಮ್, ಹರೀಶ್ ಕುಮಾರ್, ಕಾರ್ಯದರ್ಶಿ ಕುಂಙ.ಕೆ, ಗಿರೀಶ್ ಭಟ್, ಕೇಶವ ಭಟ್ ಅತ್ತಾಜೆ, ಜಯಶ್ರೀ, ಶಾಂತಪ್ಪ ಗೌಡ, ರಾಮಣ್ಣ ಗೌಡ ಮತ್ತಿತರರಿದ್ದರು.

ಪಂಚಾಯತ್ ಸಿಬ್ಬಂದಿಗಳಾದ ರವಿ.ಎಚ್, ಸುರೇಶ್ ಗೌಡ ಸಹಕರಿಸಿದರು.

LEAVE A REPLY

Please enter your comment!
Please enter your name here