ಶಿಬರಾಜೆ: ಜೆಸಿಐ ಕೊಕ್ಕಡ ಕಪಿಲಾ ಘಟಕದಿಂದ ಶಾಶ್ವತ ಯೋಜನೆಗಳ ಉದ್ಘಾಟನೆ ಪರಿಶ್ರಮ-2024 ಕಾರ್ಯಕ್ರಮ

0

ಶಿಬರಾಜೆ: ಜೆಸಿಐ ಕೊಕ್ಕಡ ಕಪಿಲಾ ಘಟಕದಿಂದ ಶಾಶ್ವತ ಯೋಜನೆಗಳ ಉದ್ಘಾಟನೆ ಪರಿಶ್ರಮ-2024 ಕಾರ್ಯಕ್ರಮ ಗ್ರಾಮಾಭ್ಯುದಯ ಕಾರ್ಯಕ್ರಮ ಅನುಷ್ಠಾನ ಸಮಿತಿ ಶಿಬರಾಜೆ ಪಾದೆ ಇಲ್ಲಿ ನೆರವೇರಿತು.ಜೆ ಸಿ ಐ ಝೋನ್ ಪ್ರೆಸಿಡೆಂಟ್ ಗಿರೀಶ್ ಎಸ್ ಪಿ ಯವರು ಜೆಸಿಐ ಕೊಕ್ಕಡ ಕಪಿಲಾ ಘಟಕದ ಕಾರ್ಯಾಲಯ, ಗ್ರಾಮಾಭ್ಯುದಯ ಅನುಷ್ಠಾನ ಸಮಿತಿಯ ಸಭಾಂಗಣ ಮತ್ತು ಜೆಸಿಐ ವತಿಯಿಂದ ನವೀಕೃತ ಗೊಳಿಸಿದ ಸುಸಜ್ಜಿತ ಅಂಗನವಾಡಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಪ್ರಾಸ್ಥಾವಿಕ ನುಡಿಯನ್ನು ಜೆಸಿಐ ಮಾರ್ಗದರ್ಶಕರು ಮತ್ತು ಗ್ರಾಮಭ್ಯುದಯ ಕಾರ್ಯಕ್ರಮ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಪಿ ಟಿ ಸಬಾಸ್ಟಿನ್ ನೆರವೇರಿಸಿದರು. ಈ ಸಂದರ್ಭದಲ್ಲಿ ಪ್ರಾ.ಕೃ.ಪ.ಸ ಸಂಘದ ನಿರ್ದೇಶಕರಾದ ನಿತ್ಯಾನಂದ ರೈ ಮತ್ತು ಜೆ ಸಿ ರಾಜರಾಮ್ ರವರು ಜೆ ಸಿ ಐ ಕೊಕ್ಕಡ ಕಪಿಲಾ ಘಟಕದ ಉತ್ತಮ ಕೆಲಸಗಳನ್ನು ಉಲ್ಲೇಖನ ಮಾಡಿ ತಮ್ಮ ಅಭಿಪ್ರಾಯ ಹಂಚಿಕೊಂಡರು.

ವೇದಿಕೆಯಲ್ಲಿ ಝೋನ್ ಪ್ರೆಸಿಡೆಂಟ್ ಗಿರೀಶ್ ಎಸ್ ಪಿ, ಜೆ ಎಫ್ ಡಿ ಶಂಕರ್ ರಾವ್, ಜೆ ಸಿ ಪ್ರಶಾಂತ್ ಕುಮಾರ್, ಜೆಸಿಐ ಕೊಕ್ಕಡ ಕಪಿಲಾ ಘಟಕದ ಅಧ್ಯಕ್ಷರಾದ ಸಂತೋಷ್ ಜೈನ್ ಅಂಗನವಾಡಿ ಇಲಾಖೆಯಿಂದ ಅನ್ನಪೂರ್ಣರವರು, ಜೆಸಿಐ ಯೋಜನಾ ನಿರ್ದೇಶಕರಾದ ಪಿ.ಟಿ ಸಬಾಸ್ಟಿನ್, ಜೆಸಿಐ ಕಾರ್ಯದರ್ಶಿ ಅಕ್ಷತ್ ರೈ, ಜೆಸಿಐ ಲೇಡಿ ಅಧ್ಯಕ್ಷರಾದ ಶೋಭಾ ಪಿ ಜೈನ್, ಜೆಜೆಸಿ ಅಧ್ಯಕ್ಷರಾದ ಹರ್ಷಿತ್ ಗೌಡ, ಜೆಸಿ ಮಾರ್ಗದರ್ಶಕರಾದ ಜೋಸೆಫ್ ಪಿರೇರಾ ಉಪಸ್ಥಿತರಿದ್ದರು.

ಅತಿಥಿಗಳನ್ನು ಜೆ ಸಿಐ ಕೊಕ್ಕಡ ಕಪಿಲಾ ಘಟಕದ ಅಧ್ಯಕ್ಷರಾದ ಸಂತೋಷ್ ಜೈನ್ ಸ್ವಾಗತಿಸಿದರು. ಝೆಡ್.ಪಿ ಯವರ ಪರಿಚಯವನ್ನು ಲೇಡಿ ಜೆ ಸಿಐ ಅಧ್ಯಕ್ಷರಾದ ಶೋಭಾ ಪಿ, ಜೇಸಿ ವಾಣಿಯನ್ನು ಆಧ್ಯ ಜೈನ ವಾದಿಸಿದರು, ಜೆಸಿಐ ಕಾರ್ಯದರ್ಶಿ ಅಕ್ಷತ್ ರೈ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here