ತುಂಬಿ ಕೆರೆಕಟ್ಟೆ ಬಿರಿಯುವ ಆತಂಕ- ಬೆಳ್ತಂಗಡಿ ತಾಲೂಕಿನ ತೋಟತ್ತಾಡಿ ಪೆರ್ನಲೆ ಕೆರೆಯಲ್ಲಿ ಮಹಾ ಆಪರೇಷನ್- ಸಿಕ್ಕಿ ಹಾಕಿಕೊಂಡ ಗೋಣಿಬಿಡಿಸಲು ಬಂದ ಮುಳುಗುತಜ್ಞ ಈಶ್ವರ್ ಮಲ್ಪೆ

0

ತೋಟತ್ತಾಡಿ: ಇಲ್ಲಿನ ಬೃಹತ್ ಕೆರೆ ಪೆರ್ನಲೆಯಲ್ಲಿ ನೀರು ನಿಂತಿದ್ದು,ಈಗ ಒತ್ತಡ ಜಾಸ್ತಿಯಾಗಿ ಕೆರೆಕಟ್ಟೆ ಬಿರುಕು ಭೀತಿಯಿದೆ.ಈ ಹಿನ್ನಲೆಯಲ್ಲಿ ಮುಳುಗುತಜ್ಞ ಈಶ್ವರ್ ಮಲ್ಪೆಯವರು ಬಂದು ಆ ಕೆರೆಯ ನೀರು ಸರಾಗವಾಗಿ ಸಾಗುವ ಗೇಟಿಗೆ ಸಿಕ್ಕಿರುವ ಗೋಣಿಚೀಲ ಬಿಡಿಸುವ ಮಹಾ ಕಾರ್ಯಾಚರಣೆ ನಡೆಸಿದ್ದಾರೆ.

ಕಾರ್ಯಾಚರಣೆ ವೇಳೆ ಕಾಂಗ್ರೆಸ್ ಮುಖಂಡ ರಕ್ಷಿತ್ ಶಿವರಾಂ, ನಾಗೇಶ್ ಕುಮಾರ್, ನಮಿತಾ ಪೂಜಾರಿ, ಪ್ರದೀಪ್ ಕೆ ಸಿ, ಪಿಡಿಒ ಪುರುಷೋತ್ತಮ್, ಚಾರ್ಮಾಡಿ ಪಂಚಾಯತ್ ಅಧ್ಯಕ್ಷೆ, ಚಾರ್ಮಾಡಿ ಗ್ರಾಮ ಪಂಚಾಯತ್ ಸದಸ್ಯರು, ಊರಿನವರು ಅಪಾರ ಗ್ರಾಮಸ್ಥರು ಸೇರಿದ್ದರು.

LEAVE A REPLY

Please enter your comment!
Please enter your name here