ಹಲೇಜಿ: ಬಿರುಗಾಳಿಗೆ ಕೃಷಿ ಹಾನಿ- ವಿದ್ಯುತ್ ಕಂಬಗಳು ಧರಾಶಾಹಿ

0

ಹಲೇಜಿ: ಹಲೇಜಿ ಪರಿಸರದಲ್ಲಿ ಜು.23ರಂದು ಭೀಸಿದ ಬಿರುಗಾಳಿಗೆ ಕೃಷಿ ಹಾನಿಯಾಗಿದೆ. ಹಲೇಜಿ ನಿವಾಸಿ ಸುಭಾಸ್ ಕೆ.ಎನ್. ರವರ ತೋಟದಲ್ಲಿ ಸುಮಾರು 35 ಅಡಿಕೆ ಗಿಡ ಹಾಗೂ ಒಂದು ತೆಂಗಿನ ಮರ ಮುರಿದುಬಿದ್ದಿದೆ. ಹತ್ತಿರದ ಗುಡ್ಡದ ಬೃಹತ್ ಮರಗಳು ಬಿದ್ದು ನಾಲ್ಕು ವಿದ್ಯುತ್ ಕಂಬಗಳು ಧರಾಶಾಹಿಯಾಗಿದೆ.

ಹಲೇಜಿ- ಕಲಾಯಿ ಪ್ರದೇಶದ ಕೆಲವು ಮನೆಗಳಿಗೆ ಎರಡು ದಿನದಿಂದ ವಿದ್ಯುತ್ ಸಂಪರ್ಕ ಇಲ್ಲದ್ದಂತಾಗಿದೆ. ಹಲೇಜಿ ಹಾಗೂ ಕಲಾಯಿ ಭಾಗದಲ್ಲಿ ನೂರಕ್ಕೂ ಹೆಚ್ಚು ಅಡಿಕೆ ಮರಗಳು ನಾಶವಾಗಿವೆ

LEAVE A REPLY

Please enter your comment!
Please enter your name here