ವಿದ್ಯಾಶ್ರೀ ಅಡೂರ್‌ರವರ 3ನೇ ಕವನಸಂಕಲನ “ಪಯಣ” ಬಿಡುಗಡೆ

0

ಉಜಿರೆ: ಧರ್ಮಸ್ಥಳದ ನೇತ್ರಾವತಿ ಬಳಿಯ ಪ್ರಣವ್ ಸಭಾಂಗಣದಲ್ಲಿ ಜು.21ರಂದು ಆಮಂತ್ರಣ ಸಾಹಿತ್ಯ ವೇದಿಕೆಯ ಪದಗ್ರಹಣ ಸಮಾರಂಭದಲ್ಲಿ ವಿದ್ಯಾಶ್ರೀ ಅಡೂರ್ ಅವರ ಮೂರನೇ ಕವನ ಸಂಕಲನ “ಪಯಣ.. ಕವನಗಳ ಹಾದಿಯಲ್ಲಿ” ಬಿಡುಗಡೆಗೊಂಡಿತು.

ಕಲಾ ಪೋಷಕ ಭುಜಬಲಿ ಧರ್ಮಸ್ಥಳ ಲೋಕಾರ್ಪಣೆಗೊಳಿಸಿದರು. ಕವಯತ್ರಿ ವಿದ್ಯಾಶ್ರೀ ಅಡೂರ್, ಅವರ ತಾಯಿ ಗೀತಾ ಕಾರಂತ್, ಮಾವ ವೆಂಕಟರಾಯ ಅಡೂರ್, ಉಜಿರೆ ಪಿಡಿಒ ಪ್ರಕಾಶ್ ಶೆಟ್ಟಿ ನೊಚ್ಚ, ದಂತವೈದ್ಯೆ ಡಾ.ದೀಪಾಲಿ ಡೋಂಗ್ರೆ, ಅ.ಭಾ.ಸಾ.ಪ. ಬೆಳ್ತಂಗಡಿಯ ಅಧ್ಯಕ್ಷ ಗಣಪತಿ ಭಟ್ ಕುಳಮರ್ವ, ಮಂಗಳೂರು ವಲಯ ಸಂಯೋಜಕ ಸುಂದರ ಶೆಟ್ಟಿ, ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆಯ ಅಧ್ಯಕ್ಷ ವಿಜಯ್ ಕುಮಾರ್ ಜೈನ್, ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಸುವರ್ಣ, ಧರ್ಮಸ್ಥಳ ಗ್ರಾಪಂ ಉಪಾಧ್ಯಕ್ಷ, ಬಿಜೆಪಿ ಬೆಳ್ತಂಗಡಿ ಮಂಡಲಾಧ್ಯಕ್ಷ ಶ್ರೀನಿವಾಸ ರಾವ್, ಧರ್ಮಸ್ಥಳ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಪ್ರೀತಮ್ ಡಿ. ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here