ಬೆಳ್ತಂಗಡಿ ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಶಿವಪ್ರಸಾದ್ ಕೊಕ್ಕಡ, ಉಪಾಧ್ಯಕ್ಷರಾಗಿ ವಿಜಯ್ ಕುಮಾರ್ ಜೈನ್, ಕಾರ್ಯದರ್ಶಿಯಾಗಿ ಅಶ್ವಿಜ ಶ್ರೀಧರ್ ಪುತ್ತಿಲ ನೇಮಕ

0

ಬೆಳ್ತಂಗಡಿ: ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಬೆಳ್ತಂಗಡಿ ಇದರ ನೂತನ ಸಮಿತಿ ರಚನೆಯಾಗಿದ್ದು ಅಧ್ಯಕ್ಷರಾಗಿ ಶಿವಪ್ರಸಾದ್ ಕೊಕ್ಕಡ, ಕಾರ್ಯದರ್ಶಿಯಾಗಿ ಅಶ್ವಿಜ ಶ್ರೀಧರ್ ಪುತ್ತಿಲ, ಕೋಶಾಧಿಕಾರಿಯಾಗಿ ನಯನ ಓಡಿಲ್ನಾಳ ಇವರು ಆಯ್ಕೆಯಾಗಿದ್ದಾರೆ.

ಉಳಿದಂತೆ ಉಪಾಧ್ಯಕ್ಷರಾಗಿ ವಿಜಯ್ ಕುಮಾರ್ ಜೈನ್ ಅಳದಂಗಡಿ, ಜೊತೆ ಕಾರ್ಯದರ್ಶಿಗಳಾಗಿ ಮಮತಾ ಸವಣಾಲು, ಶ್ರೀನಿಶಾ ಮತ್ತು ಸಂತೋಷ್ ಮುಂಡೂರು, ಪ್ರಚಾರ ಮತ್ತು ಪ್ರಸರಣ ಉಸ್ತುವಾರಿಯಾಗಿ ಅಚ್ಚು ಮುಂಡಾಜೆ, ಸಂಘಟನಾ ಉಸ್ತುವಾರಿಯಾಗಿ ಆರ್ಯನ್ (ರವಿಚಂದ್ರ) ಸವನಾಲ್, ಚುಟುಕು ಕವಿಗೋಷ್ಠಿಗಳ ಆಯೋಜನಾ ಉಸ್ತುವಾರಿಯಾಗಿ ಸುಶಾಂತ್ ಪೂಜಾರಿ ಕನ್ನಡಿಕಟ್ಟೆ ಹಾಗೂ ವಿದ್ಯಾಶ್ರೀ ಎಸ್ ಅಡೂರು ಮುಂಡಾಜೆ, ಹೊರರಾಜ್ಯ ಪ್ರಚಾರ ಉಸ್ತುವಾರಿಯಾಗಿ ಕುಮುದಾ ಡಿ ಶೆಟ್ಟಿ ಮೊಗೆರೋಡಿ, ಗೌರವ ಸಲಹೆಗಾರರಾಗಿ ಹರೀಶ್(ಹಸು ಒಡ್ಡಂಬೆಟ್ಟು) ಸುಲಾಯ ಒಡ್ಡಂಬೆಟ್ಟು ಅದ್ಯಕ್ಷರು ಚುಟುಕು ಸಾಹಿತ್ಯ ಪರಿಷತ್ತು ದ.ಕ ಜಿಲ್ಲೆ, ಕಾ.ವೀ ಕೃಷ್ಣದಾಸ್ ಅದ್ಯಕ್ಷರು ಚುಟುಕು ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ, ಇರಾ ನೇಮು ಪೂಜಾರಿ ಗೌರವಾದ್ಯಕ್ಷರು ಚುಟುಕು ಸಾಹಿತ್ಯ ಪರಿಷತ್ತು ದಕ್ಷಿಣ ಕನ್ನಡ ಜಿಲ್ಲೆ ಇವರು ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here