ಶಿರ್ಲಾಲಿನಲ್ಲಿ ಕೆ.ವಸಂತ ಬಂಗೇರರಿಗೆ ನುಡಿನಮನ

0

ಶಿರ್ಲಾಲು: ಶ್ರೀ ಬ್ರಹ್ಮ ಬೈದರ್ಕಳ ಗರಡಿ ಶಿರ್ಲಾಲು, ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಯುವ ಬಿಲ್ಲವ ವೇದಿಕೆ ಬಿಲ್ಲವ ಮಹಿಳಾ ವೇದಿಕೆ ಶಿರ್ಲಾಲು ಕರಂಬಾರು ಯುವವಾಹಿನಿ ಸಂಚಲನಾ ಸಮಿತಿ ಶಿರ್ಲಾಲು ಇದರ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ಅಗಲಿದ ಮಾಜಿ ಶಾಸಕರು ಕೆ .ವಸಂತ ಬಂಗೇರರಿಗೆ ನುಡಿನಮನ ಕಾರ್ಯಕ್ರಮ ಶಿರ್ಲಾಲು ಶ್ರೀ ಬ್ರಹ್ಮ ಬೈದರ್ಕಳ ಗರಡಿ ವಠಾರದಲ್ಲಿ ನಡೆಯಿತು.

ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯವಿಕ್ರಮ ಕಲ್ಲಾಪು ಇವರು ದೀಪ ವಂದನೆ ಮಾಡಿ ಬಂಗೇರರಿಗೆ ನುಡಿನಮನ ಸಲ್ಲಿಸುತ್ತಾ ಬಂಗೇರರು ತನ್ನ ಜೀವಿತಾವಧಿಯಲ್ಲಿ ನಾರಾಯಣ ಗುರುಗಳ ಆದರ್ಶಗಳನ್ನು ಮೈಗೂಡಿಸಿಕೊಂಡು ಎಲ್ಲಾ ಜಾತಿ ಜನಾಂಗದವರಿಗೆ ನ್ಯಾಯ ಒದಗಿಸಿಕೊಟ್ಟ ಧೀಮಂತ ನಾಯಕ. ತಾಲೂಕಿನ ಬಡ ಜನತೆಗೆ ಬಂಗೇರ ಅಗಲುವಿಕೆಯ ನೋವು ಇನ್ನೂ ಮಾಸಿಲ್ಲ.ಬಡ ಜನರ ಬಗ್ಗೆ ವಿಶೇಷ ಕಾಳಜಿಯುಳ್ಳ ನಾಯಕರು ತಾಲೂಕಿನಾದ್ಯಂತ ಅತಿಹೆಚ್ಚು ಮನೆ ನಿವೇಶನದ ಹಕ್ಕು ಪತ್ರ ವಿತರಿಸಿ ಮೂಲ ಸೌಕರ್ಯಗಳನ್ನು ಮನೆಮನೆಗೆ ತಲುಪಿಸಿಕೊಡುವಲ್ಲಿ ಕಾಳಜಿ ವಹಿಸುತ್ತಿದ್ದರು.ಅವರ ಸಾವು ನಮ್ಮೆಲ್ಲರನ್ನೂ ಕಾಡುತ್ತಿದೆ ಎಂದರು.

ಸಂಘದ ಪ್ರಧಾನ ಕಾರ್ಯದರ್ಶಿ ನಿತೀಶ್ ಎಚ್. ಮಾತನಾಡುತ್ತಾ ನಾವೆಲ್ಲರೂ ಬಂಗೇರರ ಅಭಿಮಾನಿಗಳು ಎನ್ನುವುದೇ ನಮಗೆ ಹೆಮ್ಮೆ. ನನ್ನ ಸಾಮಾಜಿಕ ಜೀವನದ ಬೆಳವಣಿಗೆಯಲ್ಲಿ ಬಂಗೇರರ ಪ್ರೋತ್ಸಾಹ ಮಾರ್ಗದರರ್ಶನ ಸಾಕಷ್ಟಿದೆ. ಕಂಬಳದ ಬಗ್ಗೆ ವಿಶೇಷ ಪ್ರೀತಿಯುಳ್ಳ ಬಂಗೇರರು ಕಂಬಳಕ್ಕೆ ಸದಾ ಪ್ರೋತ್ಸಾಹ ನೀಡುತ್ತಿದ್ದರು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ನಿಕಟ ಪೂರ್ವಾಧ್ಯಕ್ಷ ಚಿದಾನಂದ ಪೂಜಾರಿ ಎಲ್ದಕ್ಕ, ಶ್ರೀ ಬ್ರಹ್ಮ ಬೈದರ್ಕಳ ಗರಡಿ ಆಡಳಿತ ಸಮಿತಿಯ ಅಧ್ಯಕ್ಷ ವಿಶ್ವನಾಥ ಸಾಲಿಯಾನ್ ಪುದ್ದರಬೈಲು, ಗೌರವಾಧ್ಯಕ್ಷ ರಮಾನಂದ ಗುಡ್ಡಾಜೆ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸೋಮನಾಥ ಬಂಗೇರ, ಪಂಚಾಯತ್ ಮಾಜಿ ಉಪಾಧ್ಯಕ್ಷ ಹರ್ಷ ಆರ್. ಜೈನ್ ತಾಲೂಕು ಕೆಡಿಪಿ ಸದಸ್ಯ ಸುನಿಲ್ ಕುಮಾರ್ ಜೈನ್, ವಿನಯ ಕುಮಾರ್ ಜೈನ್, ತಾಲೂಕು ಭೂ ನ್ಯಾಯ ಮಂಡಳಿಯ ಸದಸ್ಯ ಬಾಬು ಎರ್ಮೆತ್ತೋಡಿ, ನಿವೃತ್ತ ಮುಖ್ಯೋಪಾಧ್ಯಾಯ ಯಶೋಧರ ಸುವರ್ಣ, ಕುಶಾಲಪ್ಪ ಗೌಡ, ಯುವವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಸದಾಶಿವ ಊರ, ಯುವ ಬಿಲ್ಲವ ವೇದಿಕೆ ಶಿರ್ಲಾಲು ಅಧ್ಯಕ್ಷ ಹರೀಶ್ ಕಲ್ಲಾಜೆ,ಬಿಲ್ಲವ ಮಹಿಳಾ ವೇದಿಕೆ ಅಧ್ಯಕ್ಷೆ ಕುಶಲ ರಮೇಶ್, ಯುವವಾಹಿನಿ ಸಂಚಲನಾ ಸಮಿತಿಯ ಅಧ್ಯಕ್ಷ ಸನತ್ ಕುಮಾರ್, ಶ್ರೀ ಸತ್ಯ ಸಾರ ಮುಪ್ಪಣ್ಣ ದೇವಸ್ಥಾನ ಸಮಿತಿಯ ಟ್ರಸ್ಟಿ ಅಂಗಾರ,ಹಾಲುತ್ಪಾದಕರ ಸಂಘದ ಉಪಾಧ್ಯಕ್ಷ ಪ್ರತಾಪ್ ಕಲ್ಲಾಜೆ, ಕೃಷ್ಣಪ್ಪ ಪೂಜಾರಿ ಕಟ್ಟ, ಬಾಬು ನಲಿಕೆ, ಸತೀಶ್ ಪೂಜಾರಿ ಗುಡ್ಡೆ, ನಂದ ಕುಮಾರ್, ಶ್ರೀದರ ಬಾರ್ಲೋಡಿ, ದಿನೇಶ್ ಕರ್ದೊಟ್ಟು, ರಮೇಶ್ ಮಜಲಪಲ್ಕೆ, ಶಿವಾನಂದ ಮಜಲಪಲ್ಕೆ, ನಾರಾಯಣ ಕರಂಬಾರು, ಪ್ರಣೀತ್ ಬಾರ್ಲೋಡಿ, ಜ್ಞಾನೇಶ್ ಕುಮಾರ್, ಪ್ರಕಾಶ್ ಕಟ್ರಬೈಲು, ರಂಜಿತ್ ಅಜಿರೋಳಿ, ದಿವಾಕರ ಶಿರ್ಲಾಲು ಹಾಗೂ ಊರವರು ಉಪಸ್ಥಿತರಿದ್ದರು.ಬಂಗೇರ ಅಭಿಮಾನಿ ಶ್ರೀನಿವಾಸ ಆಚಾರ್ಯ ವೇದಿಕೆ ಸಿದ್ದಪಡಿಸುವಲ್ಲಿ ಸಹಕರಿಸಿದರು.

ಯುವಬಿಲ್ಲವ ವೇದಿಕೆ ತಾಲೂಕು ಅಧ್ಯಕ್ಷ ಎಮ್.ಕೆ. ಪ್ರಸಾದ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಶಿರ್ಲಾಲ್ ಶ್ರೀ ಗುರುನಾರಾಯಣ ಸ್ವಾಮಿ ಸೇವಾಸಂಘ ಅಧ್ಯಕ್ಷ ಪ್ರವೀಣ್ ಪಾಲನೆ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

LEAVE A REPLY

Please enter your comment!
Please enter your name here