ಕನಸಿನ ಕೂಸು ವಾಸ್ತಲ್ಯ ಕಾರ್ಯಕ್ರಮದಡಿಯಲ್ಲಿ ಮಾಶಾಸನ ಮಂಜೂರಾತಿ ಪತ್ರ ವಿತರಣೆ

0

ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಬೆಳ್ತಂಗಡಿ ತಾಲೂಕಿನ ಯೋಜನೆಯ ಕಾರ್ಯಕ್ರಮದಡಿಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಹೇಮಾವತಿ ವಿ.ಹೆಗ್ಗಡೆಯವರ ಕನಸಿನ ಕೂಸು ವಾಸ್ತಲ್ಯ ಕಾರ್ಯಕ್ರಮದಡಿಯಲ್ಲಿ ವಿಶೇಷವಾಗಿ ನಿರ್ಗತಿಕರ ಮಾಶಾಸನವನ್ನು ಉಜಿರೆ ಕಿರಿಯಾಡಿ ನಿವಾಸಿ ಇಂದಿರಾ ರವರಿಗೆ ಕ್ಷೇತ್ರದಿಂದ ಮಂಜೂರಾತಿ ಮಾಡಲಾಯಿತು.

ಇನ್ನು ಪ್ರತೀ ತಿಂಗಳು ಕೂಡ ಇವರಿಗೆ ಒಂದು ವರ್ಷದ ಅವಧಿಗೆ ಕ್ಷೇತ್ರದಿಂದ ಮಾಶಾಸನವು ಇವರಿಗೆ ಸಿಗಲಿದ್ದು, ಸದ್ರಿ ಮಂಜೂರಾತಿ ಪತ್ರವನ್ನು ಉಜಿರೆ ಒಕ್ಕೂಟದ ಅಧ್ಯಕ್ಷೆ ಶೀಲಾವತಿಯವರು ವಿತರಿಸಿದರು.

ತಾಲ್ಲೂಕು ಯೋಜನಾಧಿಕಾರಿ ಸುರೇಂದ್ರ, ತಾಲ್ಲೂಕು ಸಮನ್ವಧಿಕಾರಿ ಮಧುರ, ವಲಯ ವೇಲ್ವಿಚಾರಕಿ ವನಿತಾ, ಸೇವಾಪ್ರತಿನಿಧಿ ಪ್ರೇಮಲತಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here