ಕೊಕ್ಕಡ: ಜೇಸಿಐ ಕಪಿಲಾ ಘಟಕ ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದ ನೇತೃತ್ವದಲ್ಲಿ ಚಿಣ್ಣರ ಲೋಕ-2024 ಶಿಬಿರದ ಸಮಾರೋಪ ಸಮಾರಂಭ

0

ಕೊಕ್ಕಡ: ಜೆಸಿಐ ಕೊಕ್ಕಡ ಕಪಿಲಾ ಘಟಕ ಮತ್ತು ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನ ಇವುಗಳ ನೇತೃತ್ವದಲ್ಲಿ ಶ್ರೀ ಸದಾಶಿವೇಶ್ವರ ದೇವಸ್ಥಾನದ ವಠಾರದಲ್ಲಿ ಮೇ 25,26ರಂದು ಎರಡು ದಿನದ ಶಿಬಿರವು ನಡೆಯಿತು.

ಈ ಶಿಬಿರದಲ್ಲಿ 39 ಮಕ್ಕಳು ಭಾಗವಹಿಸಿದರು.

ಶಿಬಿರದ ಉದ್ಘಾಟನೆಯನ್ನು ಜೆಸಿ ಭರತ್ ಶೆಟ್ಟಿ ಝೋನ್ ಡೈರೆಕ್ಟರ್ ಕಮ್ಯುನಿಟಿ ಡೆವಲಪ್ಮೆಂಟ್ ಝೋನ್ -15 ಇವರು ಉದ್ಘಾಟಿಸಿದರು.

ಈ ಸಮಾರಂಭದಲ್ಲಿ ಜೆ ಸಿ ಎಚ್ ಜಿ ಎಫ್ ಜೋಸೆಫ್ ಪಿರೇರ ಮಾರ್ಗದರ್ಶಕರು ಜೆ ಸಿ ಐ ಕೊಕ್ಕಡ ಕಪಿಲಾ, ಹಾಗೂ ಶ್ರೀ ಸದಾಶಿವೇಶ್ವರ ದೇವಸ್ಥಾನದ ಅಧ್ಯಕ್ಷ ಜೆ ಸಿ ಜೆ ಎಫ್ ಎಂ ಶ್ರೀಧರ್ ರಾವ್ ಕಾಯಡ ಮುಖ್ಯ ಅತಿಥಿಗಳಾಗಿದ್ದರು.

ಶಿಬಿರದ ಉದ್ಘಾಟನೆ ಸಮಾರಂಭದಲ್ಲಿ ನಿಕಟಪೂರ್ವ ಅಧ್ಯಕ್ಷ ಜೆ ಸಿ ಸೆನಿಟರ್ ಜಿತೇಶ್ ಪಿರೇರ, ಅಧ್ಯಕ್ಷ ಜೆ ಸಿ ಎಚ್ ಜಿ ಎಫ್ ಸಂತೋಷ್ ಜೈನ್, ಕಾರ್ಯದರ್ಶಿ ಅಕ್ಷತ್ ರೈ ಮತ್ತು ಮಹಿಳಾ ಜೆಸಿ ಅಧ್ಯಕ್ಷ ಜೆ ಸಿ ಶೋಭಾ ಪಿ ಇವರು ವೇದಿಕೆಯಲ್ಲಿದ್ದರು.

ಶಿಬಿರದ ಸಂಪನ್ಮೂಲ ವ್ಯಕ್ತಿಗಳಾಗಿ ಚಂಪಾ ಜೈನ್ ಸಮ್ಮತಿ ನಿಲಯ ಉಜಿರೆ ಅವರು ಕಸದಿಂದ ರಸ ಎಂಬ ಶಿರ್ಷಿಕೆಯಲ್ಲಿ ಕ್ರಾಫ್ಟ್ ವರ್ಕ್ ಅನ್ನು ಹೇಳಿಕೊಟ್ಟರು. ಗಂಗಾಧರ ಭಂಡಾರಿ ಅವರು ಮಕ್ಕಳಲ್ಲಿ ಸಂಸ್ಕಾರ ಮತ್ತು ಒಳ್ಳೆಯ ಸಂಸ್ಕೃತಿ ಬೆಳವಣಿಗೆಯನ್ನು ಚಟುವಟಿಕೆಗಳ ಮೂಲಕ ಮಾಹಿತಿ ನೀಡಿದರು.

ಜೆ ಸಿ ರಾಜಾರಾಮ್ ಸಂಗಮ ನಗರ ಇವರು ಜಾನಪದ ಹಾಡುಗಳನ್ನು ಮಕ್ಕಳಿಗೆ ಹೇಳಿಕೊಟ್ಟರು.ಚೇತನಾ ಎಂ ಶಿಕ್ಷಣ ಸಂಯೋಜಕರು ಸಾರ್ವಜನಿಕ ಶಿಕ್ಷಣ ಇಲಾಖೆ ಬೆಳ್ತಂಗಡಿ ಇವರು ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ಕಲಿಕ ಸಾಮರ್ಥ್ಯ ಹೆಚ್ಚಿಸುವಿಕೆ ಯನ್ನು ಹೇಳಿಕೊಟ್ಟರು.

ಎಲ್ಲ ಸಂಪನ್ಮೂಲ ವ್ಯಕ್ತಿಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.ಈ ಶಿಬಿರಕ್ಕೆ ಶ್ರೀ ಸದಾಶಿವೇಶ್ವರ ದೇವಸ್ಥಾನ ಕಳೆಂಜದ ಆಡಳಿತ ಮಂಡಳಿ ಸ್ಥಳವಕಾಶ ಮತ್ತು ಎಲ್ಲಾ ರೀತಿಯ ಸಹಾಯವನ್ನು ನೀಡಿರುತ್ತಾರೆ. ಮಕ್ಕಳಿಗೆ ಕೆಲವು ಮೈಂಡ್ ಗೇಮ್ ಆಟಗಳನ್ನು ಆಡಿಸಲಾಯಿತು. ಮೇ 26 – 2024 ಸಂಜೆ ಸಮರೂಪದ ಸಮಾರಂಭ ನಡೆಯಿತು.

ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದ ಅಧ್ಯಕ್ಷ ಜೆ ಸಿ ಜೆ ಎಫ್ ಎಂ ಕೆ ಶ್ರೀಧರ್ ರಾವ್ ಮುಖ್ಯ ಅತಿಥಿಯಾಗಿದ್ದರು.

ಈ ಸಮಾರಂಭದಲ್ಲಿ ಹತ್ತನೇ ತರಗತಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದಿರುವ ಶ್ರೀಮತಿ ಸುಮಾ ಪ್ರಕಾಶ್ ಶೆಟ್ಟಿ ಬೈಂದೂರು ಅವರ ಪುತ್ರಿ ತೃಷಾ ಶೆಟ್ಟಿ ಅವರನ್ನು ಜೆಸಿಐ ಕೊಕ್ಕಡ ಕಪಿಲಾ ಘಟಕದ ವತಿಯಿಂದ ಸನ್ಮಾನಿಸಲಾಯಿತು.

ಶಿಬಿರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಿಗೆ ಪ್ರಶಸ್ತಿ ಪತ್ರ ಘಟಕದ ವತಿಯಿಂದ ನೀಡಲಾಯಿತು.

ಶಿಬಿರದಲ್ಲಿ ಸಕ್ರಿಯವಾಗಿ ಎರಡು ದಿನವೂ ಜೆ ಸಿ ಎಚ್ ಜಿ ಎಫ್ ಜೆಸಿಂತಾ ಡಿಸೋಜ, ಜೆ ಸಿ ಚಂದನಾ ಜೈನ್, ಜೆ ಸಿ ವಿದ್ಯೆಂದ್ರ ಗೌಡ, ಜೆ ಸಿ ಯೋಗೀಶ ಎಸ್ ಪಿ, ಜೆಸಿ ಧನುಷ್ ಜೈನ್, ಜಿನ ರಾಜ್ ಪೂವಣಿ, ವೃಷಭ ಜೈನ್, ಬಾಬು ಗೌಡ ಎಣ್ಣೆ ತಂಡ, ರಾಜೇಶ್ ಶೆಟ್ಟಿ, ಕವಿತಾ ಶ್ರೀನಿವಾಸ್ ಗೌಡ ನಿಡ್ಲೆ ಇವರು ಭಾಗವಹಿಸಿದರು.

ಕಾರ್ಯಕ್ರಮದ ಕಾರ್ಯಗಾರದಲ್ಲಿ ಕಳೆಂಜ ಪಂಚಾಯತ್ ಸದಸ್ಯರಾದ ಟಿ ಎಸ್ ನಿತ್ಯಾನಂದ ರೈ ಶಾಲೆ ತಡ್ಕ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಹರೀಶ್ ರಾವ್ ಕಾಯಡ, ರಂಜಿತ್, ಕೇಶವ ಗೌಡ, ಪಾರ್ವತಿ ಮಹಾಬಲ ಸಂಗಮ ನಗರ ಮುದ್ದಿಗೆ, ನಾಟಿ ವೈದ್ಯರು ರಮಾನಾಥ ರೈ ಶೇಡಿ, ಮತ್ತು ಸ್ಥಳೀಯರು ಹಾಗೂ ಪುಟಾಣಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಶ್ರೀಧರ್ ರಾವ್ ಕಾಯಡ ಅವರು ಸನ್ಮಾನಿತರ ಪರಿಚಯಿಸಿದರು, ಜೆಸಿ ವಾಣಿಯನ್ನು ಜೂನಿಯರ್ ಜೆ ಸಿ ಅದ್ವಿತ್ ಜೈನ್ ವಾಚಿಸಿದರು, ಶಿಬಿರದ ನಿರ್ದೇಶಕ ಜೆ ಸಿ ಶೋಭಾ ಪಿ ಇವರು ಶಿಬಿರದ ವರದಿಯನ್ನು ಓದಿದರು, ಸಂತೋಷ್ ಜೈನ್ ಸ್ವಾಗತಿಸಿ, ಅಕ್ಷತ್ ರೈ ಕಾರ್ಯಾಗಾರವನ್ನು ವಂದಿಸಿದರು.

LEAVE A REPLY

Please enter your comment!
Please enter your name here