ಅರಸಿನಮಕ್ಕಿ: ಶಿಬಾಜೆ ಕಾರ್ಯ ಕ್ಷೇತ್ರದ ಪೆರ್ಲ ಒಕ್ಕೂಟದ ತ್ರೈಮಾಸಿಕ ಸಭೆ

0

ಪೆರ್ಲ: ಅರಸಿನಮಕ್ಕಿ ವಲಯದ ಶಿಬಾಜೆ ಕಾರ್ಯ ಕ್ಷೇತ್ರದ ಪೆರ್ಲ ಒಕ್ಕೂಟದ ತ್ರೈಮಾಸಿಕ ಸಭೆಯನ್ನು ಒಕ್ಕೂಟದ ಅಧ್ಯಕ್ಷೆ ವನಿತ ವಿ ಶೆಟ್ಟಿಗಾರ್ ರವರ ಅಧ್ಯಕ್ಷತೆಯಲ್ಲಿ ಪೆರ್ಲ ಶಾಲೆಯಲ್ಲಿ ನಡೆಸಲಾಯಿತು.

ಸಭೆಯಲ್ಲಿ ಜನಜಾಗೃತಿ ತಾಲೂಕು ಸಮಿತಿಯ ಸದಸ್ಯ ಹೆಚ್.ಎಸ್ ಚೆನ್ನಪ್ಪ ಗೌಡ, ಆಂತರಿಕ ಲೆಕ್ಕಪರಿಶೋಧಕ ಶಿವರಾಮ್, ವಲಯ ಮೇಲ್ವಿಚಾರಕಿ ಶಶಿಕಲಾ, ಸೇವಾ ಪ್ರತಿನಿಧಿ ಅರುಣಾ, ವಿ.ಎಲ್.ಇ ದಿವ್ಯ, ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಗುಂಪು ಲೆಕ್ಕ ಪರಿಶೋಧಕ ಶಿವರಾಮ್ ತುರ್ತು ಆಡಿಟ್ ಮತ್ತು ದಾಖಲತಿ ನಿರ್ವಹಣೆಯ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡಿದರು.

ಜನಜಾಗೃತಿ ತಾಲೂಕು ಸದಸ್ಯ ಹೆಚ್.ಎಸ್ ಚೆನ್ನಪ್ಪ ಗೌಡ ರವರು ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ಹಾಗು ಜನಜಾಗೃತಿ ಕಾರ್ಯಕ್ರಮದೊಂದಿಗೆ ನವಜೀವನ ಸಮಿತಿಯನ್ನು ಬಲಪಡಿಸುವ ಬಗ್ಗೆ ಮಾಹಿತಿ ನೀಡಿದರು.

ಮೇಲ್ವಿಚಾರಕಿ ಶಶಿಕಲಾರವರು ಒಕ್ಕೂಟದ ಬಲವರ್ಧನೆ ಒಕ್ಕೂಟದ ಪದಾಧಿಕಾರಿಗಳ ಜವಾಬ್ದಾರಿ, ಯೋಜನೆಯ ಎಲ್ಲಾ ಕಾರ್ಯಕ್ರಮಗಳಲ್ಲಿ ಸದಸ್ಯರು ಭಾಗವಹಿಸುವಂತೆ ತಿಳಿಸಿದರು.

ಜವಾಬ್ದಾರಿ ತಂಡದಿಂದ ಸದಸ್ಯರು ಅನಿಸಿಕೆಯನ್ನು ವ್ಯಕ್ತಪಡಿಸಿದರು. ಯಮುನಾ ಸ್ವಾಗತಿಸಿದರು. ಚಿದಾನಂದ ಪೂಚಾರಿ ಧನ್ಯವಾದವಿತ್ತರು ರಾಷ್ಟ್ರ ಗೀತೆಯೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಲಾಯಿತು.

LEAVE A REPLY

Please enter your comment!
Please enter your name here