ಧರ್ಮಸ್ಥಳ ಚರ್ಚ್ ನಲ್ಲಿ ಧರ್ಮಾಧ್ಯಕ್ಷ ಲಾರೆನ್ಸ್ ಮುಕ್ಕುಯಿಯವರಿಗೆ ಸನ್ಮಾನ

0

ಧರ್ಮಸ್ಥಳ: ಧರ್ಮಸ್ಥಳ ಸೈಟ್ ಜೋಸೆಫ್ ಚರ್ಚಿನಲ್ಲಿ ಧರ್ಮಾಧ್ಯಕ್ಷರಾಗಿ ಅಭಿಷಕ್ತರಾಗಿ ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ.ವಂ ಲಾರೆನ್ಸ್ ಮುಕ್ಕುಯಿ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅ.ವಂ ಲಾರೆನ್ಸ್ ಮುಕ್ಕುಯಿ ಅವರು ಕಳೆದ ಇಪ್ಪತ್ತೈದು ವರ್ಷಗಳಲ್ಲಿ ದೇವರ ಅನುಗ್ರಹದಿಂದ ಎಲ್ಲರ ಸಹಕಾರದಿಂದ ಹಲವಾರು ರೀತಿಯ ಅಭಿವೃದ್ಧಿ ಸಾಧ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಅ‌.ವಂ ಜೋಸ್ ವಲಿಯಪರಂಬಿಲ್ ಮಾತನಾಡಿ ಶುಭ ಹಾರೈಸಿದರು.

ವೇದಿಕೆಯಲ್ಲಿ ಧರ್ಮಗುರುಗಳಾದ ಫಾ‌.ಕುರಿಯಾಕೋಸ್ ವೆಟ್ಟುವಯಿ, ಧರ್ಮಸ್ಥಳ ಚರ್ಚಿನ ಧರ್ಮಗುರುಗಳಾದ ಫಾ.ರೋಕಿ ಮೇನಾಚೇರಿ ಉಪಸ್ಥಿತರಿದ್ದರು.

ಅಬ್ರಹಾಂ ಜೇಮ್ಸ್ ಅಭಿನಂದನಾ ಭಾಷಣ ಮಾಡಿದರು.ಶಿಬಿ ಧರ್ಮಸ್ಥಳ ಸ್ವಾಗತಿಸಿ ವಂದಿಸಿದರು.ಪಾಲನಾ ಮಂಡಳಿಯ ಸದಸ್ಯರಾದ ಟಿ.ವಿ ದೇವಸ್ಯ, ಕ್ಸೇವಿಯರ್ ಸಿ ಎಕ್ಸ್, ಜೋರ್ಜ್ ಎಂ.ಡಿ, ಅಬ್ರಹಾಂ ಪುನ್ನವಿಳ ಸಹಕರಿಸಿದರು.

ಈ ಸಂದರ್ಭದಲ್ಲಿ ಧರ್ಮಸ್ಥಳ ಸೈಟ್ ಜೋಸೆಫ್ ಚರ್ಚಿನ ನವೀಕರಿಸಿದ ಬಲಿವೇದಿಕೆಯ ಪವಿತ್ರೀಕರಣವನ್ನು ಹಾಗೂ ನೂತನವಾಗಿ ಮಣಿಯಂಗೇರಿಕಳಂ ಕುಟುಂಬಸ್ಥರ ಪ್ರಾಯೋಜಕತ್ವದಲ್ಲಿ ನಿರ್ಮಾಣಗೊಂಡ “ಪಿಯಾತಾ” ದ ಪವಿತ್ರೀಕರಣವನ್ನು ಧರ್ಮಾಧ್ಯಕ್ಷರು ನೆರವೇರಿಸಿದರು.

LEAVE A REPLY

Please enter your comment!
Please enter your name here