ಕಡಿರುದ್ಯಾವರ ತೋಟಕ್ಕೆ ಕಾಡಾನೆ ಹಿಂಡು ದಾಳಿ

0

ಕಡಿರುದ್ಯಾವರ ಗ್ರಾಮದ ಪಣಿಕ್ಕಲ್ಲು ಎಂಬಲ್ಲಿ ಕಾಡಾನೆಗಳ ಹಿಂಡು ಅಡಕೆ ತೋಟಕ್ಕೆ ದಾಳಿ ಇಟ್ಟ ಘಟನೆ ಡಿ.4 ರ ತಡರಾತ್ರಿ ನಡೆದಿದೆ.

ಪಣಿಕಲ್ಲಿನ ಕೃಷಿಕ ರಾಘವೇಂದ್ರ ಪಟವರ್ಧನ್ ಅವರ ತೋಟಕ್ಕೆ ರಾತ್ರಿ 12ರ ಬಳಿಕ ಕಾಡಾನೆಗಳ ಹಿಂಡು ಪ್ರವೇಶಿಸಿದೆ.ಇದು ತಕ್ಷಣ ಮನೆಯವರ ಗಮನಕ್ಕೆ ಬಂದಿದ್ದು ಅವರು ಪರಿಸರದ ಮಂದಿಗೆ ವಿಚಾರ ತಿಳಿಸಿದ್ದಾರೆ.

ಈ ವೇಳೆ ಸ್ಥಳೀಯರು ಒಟ್ಟಾಗಿ ಕಾಡಾನೆ ಹಿಂಡನ್ನು ಪಟಾಕಿ ಸಿಡಿಸಿ ತೋಟದಿಂದ ಓಡಿಸಿದ್ದಾರೆ.ಅಷ್ಟರಲ್ಲಿ ಆನೆಗಳು ಹತ್ತಕ್ಕಿಂತ ಅಧಿಕ ಅಡಿಕೆ ಮರಗಳನ್ನು ಮುರಿದು ಹಾಕಿವೆ.ರಾಘವೇಂದ್ರ ಪಟವರ್ಧನ್ ಅವರ ತೋಟಕ್ಕೆ ಕಳೆದ ಒಂದು ತಿಂಗಳಲ್ಲಿ ಕಾಡಾನೆಗಳು ದಾಳಿ ನಡೆಸಿರುವುದು ಇದು ಮೂರನೇ ಬಾರಿ ಆಗಿದೆ.ಈಗಾಗಲೇ ಅವರ ತೋಟದಲ್ಲಿ 100ಕ್ಕಿಂತ ಅಧಿಕ ಅಡಕೆಮರ, ಹತ್ತಾರು ತೆಂಗಿನ ಮರ, ಬಾಳೆ ಕೃಷಿ ಆನೆ ದಾಳಿಯಿಂದ ನಾಶವಾಗಿದೆ.6ಕ್ಕಿಂತ ಹೆಚ್ಚು ಇರುವುದನ್ನು ಸ್ಥಳೀಯರು ಕಂಡಿದ್ದಾರೆ.ಆರು ಆನೆಗಳು ತೋಟದಲ್ಲಿ ಕಂಡುಬಂದಿದೆ.

LEAVE A REPLY

Please enter your comment!
Please enter your name here