ಮುಂಡಾಜೆ ಪರಶುರಾಮ ದೇವಸ್ಥಾನದ ವಾರ್ಷಿಕ ದೀಪೋತ್ಸವ ಸಂಪನ್ನ

0

ಬೆಳ್ತಂಗಡಿ: ಮುಂಡಾಜೆಯ ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನದ ವಾರ್ಷಿಕ ದೀಪೋತ್ಸವ ಕಾರ್ಯಕ್ರಮ ಡಿ.1 ರಂದು ಜರಗಿತು.ವೇದಮೂರ್ತಿ ರವಿಕಿರಣ ಮರಾಠೆ ಅವರ ನೇತೃತ್ವದಲ್ಲಿ ಬೆಳಿಗ್ಗೆ ಪರಶುರಾಮ, ಸಿದ್ಧಿ ವಿನಾಯಕ, ಅನ್ನಪೂರ್ಣೇಶ್ವರಿ ಸನ್ನಿಧಿಯಲ್ಲಿ ವಿಶೇಷ ಸೇವೆಗಳು ಜರಗಿದವು.ದೇವರಿಗೆ ಅಡಕೆ,ತೆಂಗು ಹಾಗೂ ಇತರ ಕೃಷಿ ಉತ್ಪನ್ನಗಳ ರಾಶಿ ಪೂಜೆ,ಆಹ್ವಾನಿತ ಭಜನಾ ತಂಡಗಳಿಂದ ಕುಣಿತ ಭಜನೆ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.

ಸಂಜೆ ಸ್ಯಾಕ್ಸಫೋನ್ ವಾದನ, ನೃತ್ಯ ಕಾರ್ಯಕ್ರಮ, ದೇವರ ಉತ್ಸವ, ಅಷ್ಟಸೇವೆ, ಮಹಾಪೂಜೆ ನಡೆಯಿತು.

ರಾಕೇಶ ಫಡಕೆ, ಋತುಪರ್ಣ ಡೋಂಗ್ರೆ, ಪ್ರೇಮಾನಂದ ಫಡಕೆ, ಶಶಾಂಕ ಮರಾಠೆ, ಶ್ರೀಕಾಂತ ಗೋರೆ, ಸುಧೀರ ಪರಾಂಜಪೆ, ರಾಘವೇಂದ್ರ ಪಟವರ್ಧನ್ ಮತ್ತಿತರರು ವೈದಿಕ ಕಾರ್ಯಕ್ರಮಗಳಲ್ಲಿ ಸಹಕಾರ ನೀಡಿದರು.

ಆಡಳಿತ ಮೊಕ್ತೇಸರ ವೆಂಕಟೇಶ್ವರ ಭಟ್, ಗೌರವಾಧ್ಯಕ್ಷ ಜಗದೀಶ್ ಆರ್‌.ಫಡಕೆ, ಅಧ್ಯಕ್ಷ ವಾಸುದೇವ ಗೋಖಲೆ, ಉಪಾಧ್ಯಕ್ಷ ವಿಶ್ವನಾಥ ಶೆಟ್ಟಿ, ಕಾರ್ಯದರ್ಶಿ ಬಾಬು ಪೂಜಾರಿ, ಖಜಾಂಜಿ ಪ್ರಹ್ಲಾದ್ ಫಡಕೆ, ಜಾತ್ರೋತ್ಸವ ಸಮಿತಿಯ ಅಧ್ಯಕ್ಷ ಅಗರಿ ರಾಮಣ್ಣ ಶೆಟ್ಟಿ, ಕಾರ್ಯದರ್ಶಿ ಜಯಚಂದ್ರ ಎಂ.ಪಿ., ಖಜಾಂಜಿ ರಾಮಚಂದ್ರ ಭಟ್ ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here