ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಬೆಳ್ತಂಗಡಿ ವಲಯದ ವತಿಯಿಂದ ಗಾಂಧಿ ಜಯಂತಿ

0

ಬೆಳ್ತಂಗಡಿ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಬೆಳ್ತಂಗಡಿ ವಲಯದ ವತಿಯಿಂದ ಗಾಂಧಿ ಜಯಂತಿ ಅಂಗವಾಗಿ ಕಪುಚಿನ್ ಕೃಷಿಕರ ಸೇವಾ ಕೇಂದ್ರ ವಿಮುಕ್ತಿ ಸಂಸ್ಥೆಯ ದಯಾ ವಿಶೇಷ ಶಾಲೆ ಶಾಲೆಯಲ್ಲಿ ಗಾಂಧಿ ಜಯಂತಿ ಕಾರ್ಯಕ್ರಮ ನಡೆಸಲಾಯಿತು.

ಮಕ್ಕಳ ಪ್ರಾರ್ಥನೆಯಿಂದ ಆರಂಭಗೊಂಡು ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಸೌತ್ ಕೆನರಾ ಫೋಟೋಗ್ರಾಪರ್ಸ ಅಸೋಸಿಯೇಷನ್ ಬೆಳ್ತಂಗಡಿ ವಲಯದ ಅಧ್ಯಕ್ಷೆ ಸಿಲ್ವಿಯ ಬೆಳ್ತಂಗಡಿ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ದಯಾ‌ ಸ್ಪೆಷಲ್ ಸ್ಕೂಲ್ ಇದರ ಧರ್ಮಗುರುಗಳು ವಿನೋದ್ ಗಾಂದಿ ಜಯಂತಿಯ ಆಚರಣೆ ಬಗ್ಗೆ ಮಾತನಾಡಿದರು.ಬೆಳ್ತಂಗಡಿ ವಲಯದ ಪ್ರಧಾನ ಕಾರ್ಯದರ್ಶಿ ವಿಜಯ ಹೆಚ್ ಪ್ರಸಾದ್ ಗೇರುಕಟ್ಟೆ, ಉಪಾಧ್ಯಕ್ಷ ಗಣೇಶ್ ನರ್ಮದಾ ವೇಣೂರು, ರತ್ನಾಕರ ಪುಂಜಾಲಕಟ್ಟೆ, ಜೊತೆ ಕಾರ್ಯದರ್ಶಿ ಶಿವಪ್ರಸಾದ್ ಉಜಿರೆ, ಕೋಶಾಧಿಕಾರಿ ಹರೀಶ್ ಕೊಳ್ತಿಗೆ, ಸಂಘಟನಾ ಕಾರ್ಯದರ್ಶಿ ಗಣೇಶ್ ಹೆಗ್ಡೆ ನಾರಾವಿ, ಪತ್ರಿಕಾ ಪ್ರತಿನಿಧಿ ರಂಜನ್ ಕುಮಾರ್ ನೆರಿಯ, ಜಿಲ್ಲಾ ಕಟ್ಟಡ ಸಮಿತಿಯ ಸದಸ್ಯರು ಮಹಾವೀರ ಜೈನ್, ಜಿಲ್ಲಾ ಪ್ರತಿನಿಧಿ ಅಶೋಕ ಆಚಾರ್ಯ, ಮನು ಮದ್ದಡ್ಕ, ಸಂಘದ ಸ್ಥಾಪಕಾಧ್ಯಕ್ಷ ಪಾಲಾಕ್ಷ ಸುವರ್ಣ ಬೆಳ್ತಂಗಡಿ, ಸೌತ್ ಕೆನರಾ ಫೋಟೋಗ್ರಾಫರ್ಸ್ ವಿವಿದ್ದೋದ್ದೇಶ ಸಹಕಾರಿ ಸಂಘದ ನಿರ್ಧೇಶಕ ವಿಲ್ಸನ್ ಬೆಳ್ತಂಗಡಿ, ಕೆ ವಸಂತ್ ಶರ್ಮಾ ಉಜಿರೆ, ರಾಮಕೃಷ್ಣ ರೈ ಉಜಿರೆ, ಗೋಪಾಲ ಅಳದಂಗಡಿ, ಉಮೇಶ್ ರಾಕೇಶ್ ಟಿ ಬಿ ಕ್ರಾಸ್ ಉಜಿರೆ, ಪ್ರವೀಣ್ ಕೆದ್ದು ಅಳದಂಗಡಿ, ದಯಾ ವಿಶೇಷ ಶಾಲೆಯ ಶಿಕ್ಷಕರು ಸಿಬ್ಬಂದಿ ವರ್ಗ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here