ನಾಳೆ ನಡೆಯಲಿದ್ಯಾ ಅಣ್ಣಪ್ಪ ಸ್ವಾಮಿಯೆದುರು ಪ್ರಮಾಣ-ಸೌಜನ್ಯ ತಾಯಿ ಕುಸುಮಾವತಿ ಆಗಮನಕ್ಕೆ ಕಾಯುತ್ತಿರುವುದಾಗಿ ಉದಯ್,ಧೀರಜ್,ಮಲ್ಲಿಕ್ ಸಂದೇಶ-ಕುತೂಹಲದ ಕೇಂದ್ರವಾಗಿದೆ ಧರ್ಮಸ್ಥಳ

0

ಧರ್ಮಸ್ಥಳ: ಸೌಜನ್ಯ ಸಾವಿಗೆ ನ್ಯಾಯ ಸಿಗಬೇಕೆಂದು ರಾಜ್ಯಾದಾದ್ಯಂತ ಹೋರಾಟಗಳು ನಡೆಯುತ್ತಿವೆ. ನಾಳೆ ವಿಶ್ವ ಹಿಂದೂ ಪರಿಷತ್,ಭಜರಂಗದಳ ಧರ್ಮಸ್ಥಳಕ್ಕೆ ಆಯೋಜಿಸಿರುವ ಪಾದಯಾತ್ರೆಯಲ್ಲಿ ಸೌಜನ್ಯ ತಾಯಿ ಕುಸುಮಾವತಿ ಭಾಗವಹಿಸಲಿದ್ದಾರೆ ಎಂಬ ಸುದ್ದಿ ಹರಡಿದೆ.

ಈ ಹಿನ್ನಲೆಯಲ್ಲಿ ಸೌಜನ್ಯ ತಾಯಿಯವರು ಆರೋಪ ಮಾಡಿರುವ ಮೂವರು ಯುವಕರಾದ ಧೀರಜ್ ಕೆಲ್ಲ, ಮಲ್ಲಿಕ್ ಜೈನ್, ಉದಯ್ ರವರು ಪ್ರಮಾಣಕ್ಕೆ ಸಿದ್ಧ ಎಂದಿದ್ದಾರೆ. ನಾಳೆ ಅಣ್ಣಪ್ಪ ಸ್ವಾಮಿಯ ಬೆಟ್ಟದ ಸಮೀಪ ಕಾಯುತ್ತಿರುತ್ತೇವೆ, ನಮಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲವೆಂದು ಪ್ರಮಾಣ ಮಾಡಲು ಸಿದ್ಧ ಎಂಬ ವಾಟ್ಸಾಪ್ ಸಂದೇಶದ ಬಗ್ಗೆ ಸುದ್ದಿ ಮಲ್ಲಿಕ್ ಜೈನ್ ರವರಲ್ಲಿ ವಿಚಾರಿಸಿದಾಗ, “ಹೌದು ನಾವು ಪ್ರಮಾಣಕ್ಕೆ ಸಿದ್ಧರಿದ್ದೇವೆ.‌ ಅದಕ್ಕಾಗಿ ಮೆಸೆಜ್ ಹಾಕಿದ್ದೇವೆ. ಕುಸುಮಾವತಿಯವರು ದಯವಿಟ್ಟು ಬರಬೇಕು. ನಾವು ಪ್ರಮಾಣ ಮಾಡುತ್ತೇವೆ.ಅವರೂ ಪ್ರಮಾಣ ಮಾಡಲಿ ಅನ್ನುವ ಕಾರಣಕ್ಕೆ ಸಂದೇಶ ರವಾನಿಸಿದ್ದೇವೆಂದು ತಿಳಿಸಿದರು.

ವಾಟ್ಸಾಪ್ ಮೆಸೆಜ್ ನಲ್ಲಿ ಏನಿದೆ?- ಸೌಜನ್ಯ ತಾಯಿ ಕುಸುಮಾವತಿಯವರಿಗೊಂದು ಸುವರ್ಣವಕಾಶ.

ನಾಳೆ ದಿನಾಂಕ 27.08.2023ರ ಭಾನುವಾರದಂದು ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳ ಪಾದಯಾತ್ರೆಯೊಂದನ್ನು ಆಯೋಜಿಸಿದ್ದು, ತಾವು ಈ ಪಾದಯಾತ್ರೆಯಲ್ಲಿ ಭಾಗವಹಿಸುವುದಾಗಿ ತಿಳಿದುಬಂದಿರುತ್ತದೆ.ಪ್ರಕರಣ ನಡೆದು ಸುಮಾರು ಒಂದು ವರ್ಷಗಳ ನಂತರ ನಮ್ಮ ಮೂರು ಜನರ ಹೆಸರನ್ನು ಉಲ್ಲೇಖಿಸಿ ಆರೋಪಗಳನ್ನು ಮಾಡಿರುತ್ತೀರಿ.ವಿವಿಧ ತನಿಖೆಗಳ ನಂತರ ನಾವು ನಿರಪರಾಧಿಗಳೆಂದು ನ್ಯಾಯಾಲಯ ತೀರ್ಪು ಕೊಟ್ಟ ನಂತರವೂ ನಮ್ಮ ಬಗ್ಗೆ ರಾಜ್ಯಾದ್ಯಂತ ಆರೋಪಗಳನ್ನು ಮಾಡುತ್ತಾ ತಿರುಗುತ್ತಿರುವಿರಿ.ನಾಳೆ ನಿಮಗೊಂದು ಸುವರ್ಣ ಅವಕಾಶ. ಬಹುಷಃ ಅಣ್ಣಪ್ಪ ಸ್ವಾಮಿಯ ಇಚ್ಛೆಯೇ ಇದಾಗಿರಬಹುದು.ನಾವು ಮೂರು ಜನ ಅಣ್ಣಪ್ಪ ಸ್ವಾಮಿಯ ಮುಂದೆ ನಮ್ಮ ನಿರಪರಾಧಿತನವನ್ನು ಹೇಳಿಕೊಳ್ಳುತ್ತೇವೆ.ನೀವು ಭಾಷಣಗಳಲ್ಲಿ ನಮ್ಮನ್ನು ಆರೋಪಿಸಿದ ರೀತಿಯಲ್ಲಿ ಅಣ್ಣಪ್ಪನ ಮುಂದೆ ಪ್ರಮಾಣ ಮಾಡಿ.ನ್ಯಾಯ ತೀರ್ಮಾನ ಅಣ್ಣಪ್ಪನ ಮೆಟ್ಟಿಲಲ್ಲಿಯೇ ಆಗಲಿ.ಈ ಅವಕಾಶ ಸೃಷ್ಟಿಸಿದ ವಿಶ್ವಹಿಂದೂ ಪರಿಷತ್, ಬಜರಂಗದಳಕ್ಕೆ ಧನ್ಯವಾದಗಳು.-ಧೀರಜ್ ಕೆಲ್ಲ, ಮಲಿಕ್ ಜೈನ್, ಉದಯ್ ಜೈನ್.

LEAVE A REPLY

Please enter your comment!
Please enter your name here