ಕೊಕ್ಕಡ ಗೌಡರ ಯಾನೆ ಒಕ್ಕಲಿಗರ ಗ್ರಾಮ ಸಮಿತಿಯಿಂದ ಪ್ರತಿಭಟನೆ, ಮನವಿ

0

ಕೊಕ್ಕಡ: ಗೌಡರ ಯಾನೆ ಒಕ್ಕಲಿಗರ ಗ್ರಾಮ ಸಮಿತಿ ಕೊಕ್ಕಡ ವತಿಯಿಂದ ಶ್ರೀ ರಾಮ ಭಜನಾ ಮಂದಿರದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ರಥಬೀದಿ ಹಾದಿಯಾಗಿ ಕೊಕ್ಕಡ ಗ್ರಾಮ ಪಂಚಾಯತ್ ಗೆ ಬಂದು ಪಂಚಾಯತ್ ಸಿಬ್ಬಂದಿಗಳ ಮೂಲಕ ಮುಖ್ಯಮಂತ್ರಿಗೆ ಸೌಜನ್ಯಾ ಅತ್ಯಾಚಾರಿಗಳನ್ನು ಕಂಡುಹಿಡಿದು ಶಿಕ್ಷಿಸುವಂತೆ ಮರುತನಿಖೆ ಮಾಡಿಸುವಂತೆ ಮನವಿ ಮಾಡಿದರು.

ತಾಲೂಕು ಸಮಿತಿ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಗ್ರಾಮ ಸಮಿತಿ ಅಧ್ಯಕ್ಷ ಜಯಂತ್ ಗೌಡ ಅಡಿಲ್, ಕಾರ್ಯದರ್ಶಿ ಪ್ರಶಾಂತ್.ಪಿ, ಯುವ ಘಟಕ ಜಿಲ್ಲಾ ಪ್ರಮುಖ್ ಗಣೇಶ್ ಕಾಲಯಿ, ಗ್ರಾಮಸ್ಥರು ಉಪಸ್ಥಿತರಿದ್ದರು.ಪ್ರತಿಭಟನೆಯಲ್ಲಿ ಗೌಡ ಸಮುದಾಯದ ಭಾಂಧವರಲ್ಲದೆ ಸಾರ್ವಜನಿಕರು ಸಹಕರಿಸಿದರು.

LEAVE A REPLY

Please enter your comment!
Please enter your name here