ವರಮಹಾಲಕ್ಷ್ಮಿ ಸಮಿತಿ ಮಾಯಾದಿಂದ ಮಾಯಾಮಹಾದೇವ ದೇವಸ್ಥಾನದಲ್ಲಿ ಶ್ರಮದಾನ

0

ಬೆಳಾಲು: ಆ.25ರಂದು ವರಮಹಾಲಕ್ಷ್ಮಿ ವ್ರತ ಪೂಜೆಯು ನಡೆಯಲಿದ್ದು ಆ ಪ್ರಯುಕ್ತ ಆ.20ರಂದು ಮಾಯಾಮಹದೇವ ದೇವಸ್ಥಾನದ ವಠಾರದಲ್ಲಿ ವರಮಹಾಲಕ್ಷ್ಮಿ ಪೂಜಾ ಸಮಿತಿಯ ವತಿಯಿಂದ ಶ್ರಮದಾನ ನಡೆಯಿತು.

ಈ ಶ್ರಮದಾನದಲ್ಲಿ ಸಮಿತಿಯ ಗೌರವಾಧ್ಯಕ್ಷೆ ಸುಕನ್ಯಾ ನಾರಾಯಣ ಸುವರ್ಣ ಮಂಜನೊಟ್ಟು, ನಿಕಟಪೂರ್ವ ಅಧ್ಯಕ್ಷರಾದ ಭಾರತಿ ಕೇಶವ ಗೌಡ ಮಾರ್ಪಾಲು, ಅಧ್ಯಕ್ಷರಾದ ಶೀಲಾವತಿ ಧರ್ಮೇಂದ್ರ ಗೌಡ ಪುಚ್ಚೆಹಿತ್ತಿಲು, ಕಾರ್ಯದರ್ಶಿ ಜಯಶ್ರೀ ಸುರೇಶ್ ಕನಿಕ್ಕಿಲ, ಉಪಾಧ್ಯಕ್ಷರಾದ ಜಾನಕಿ ಹಿಪ್ಪ, ನಿಕಟಪೂರ್ವ ಕಾರ್ಯದರ್ಶಿ ಕುಮಾರಿ ಸುರೇಖಾ ಬೆರ್ಕೆಜಾಲು, ಹಾಗೂ ಸದಸ್ಯರಾದ ಕನ್ನಿಕಾ ಪದ್ಮಗೌಡ ಬೆಳಾಲು, ಹರಿಣಿ ಗಾಂಧಿನಗರ, ಮಮತಾ ಎಂಜಿರಿಗೆ, ಸುಜಾತ ಮಂಜುಶ್ರೀ ನಿಲಯ, ಮತ್ತು ಭಿರ್ಮಣ ಪೂಜಾರಿ ಪೆಲತ್ತಡಿ, ಹಾಗೂ ಧರ್ಮೇಂದ್ರ ಗೌಡ ಪುಚ್ಚೆಹಿತ್ತಿಲು, ಶೇಖರ ಗೌಡ ಕೊಲ್ಲಿಮಾರು, ಸತೀಶ್ ಎಂ.ಕೆ ಮಾಯ, ಸುಮನ್ ಮತ್ತು ಕವಿನ್ ಪುಚ್ಚೆಹಿತ್ತಿಲು ಭಾಗವಹಿಸಿದರು.

LEAVE A REPLY

Please enter your comment!
Please enter your name here