ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಬೆಳ್ತಂಗಡಿ ವಲಯದಲ್ಲಿ ಸ್ವಾತಂತ್ರೋತ್ಸವ ಆಚರಣೆ

0

ಬೆಳ್ತಂಗಡಿ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ದ.ಕ ಉಡುಪಿ ಜಿಲ್ಲೆ ಬೆಳ್ತಂಗಡಿ ವಲಯದಲ್ಲಿ 77ನೇ ವರ್ಷದ ಸ್ವಾತಂತ್ರೋತ್ಸವನ್ನು ಛಾಯಾಭವನ ಗುರುವಾಯನಕೆರೆಯಲ್ಲಿ ಆಚರಿಸಲಾಯಿತು.

ಸಂಘದ ಹಿರಿಯ ಛಾಯಾಗ್ರಾಹಕರಾದ ಸುಂದರ್ ಸಂಧ್ಯಾ ಸ್ಟುಡಿಯೋ ಬೆಳ್ತಂಗಡಿ ಇವರು ಧ್ವಜಾರೋಹಣ ನೆರವೇರಿಸಿ, ಶುಭ ಹಾರೈಸಿದರು.ಸಂಘದ ಸ್ಥಾಪಕ ಅಧ್ಯಕ್ಷರಾದ ಪಾಲಕ್ಷ ಪಿ ಸುವರ್ಣ ಸ್ವಾತಂತ್ರೋತ್ಸವಕ್ಕೆ ಶುಭ ಕೋರಿದರು.

ಸಂಘದ ಉಪಾಧ್ಯಕ್ಷ ಗಣೇಶ್ ನರ್ಮದ ವೇಣೂರು, ಪ್ರವೀಣ್ ಕೆದ್ದು, ಪ್ರಧಾನ ಕಾರ್ಯದರ್ಶಿ ಹರ್ಷ ಬಳ್ಳಮಂಜ, ನೂತನ ಅಧ್ಯಕ್ಷರಾದ ಸಿಲ್ವಿಯ ಬೆಳ್ತಂಗಡಿ, ಜಿಲ್ಲಾ ಪತ್ರಿಕ ಪ್ರತಿನಿಧಿ ಉಮೇಶ್ ಮನು ಮದ್ದಕ್ಕ, skp ಜಿಲ್ಲಾ ಸಹಕಾರಿ ಸಂಘದ ನಿರ್ದೇಶಕರಾದ ವಿಲ್ಸನ್ ಜಾರ್ಜ್ ಬೆಳ್ತಂಗಡಿ, ಸಲಹೆಗಾರರಾದ ಉಮೇಶ್ ಹಳೆಪೇಟೆ, ಉಜಿರೆ ಗೋಪಾಲ್ ಅಳದಂಗಡಿ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here