ವೇಣೂರು ವಲಯ ಕಾಂಗ್ರೆಸ್ ಪಕ್ಷದ ವತಿಯಿಂದ ನೂತನ ಬ್ಲಾಕ್ ಅಧ್ಯಕ್ಷ ಸತೀಶ್ ಕಾಶಿಪಟ್ಣ ರಿಗೆ ಅಭಿನಂದನೆ

0

ವೇಣೂರು: ನೂತನವಾಗಿ ನೇಮಿಸಲ್ಪಟ್ಟ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಸತೀಶ್ ಬಂಗೇರ ಕಾಶಿಪಟ್ನ ಮತ್ತು ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ರಿಗೆ ಸನ್ಮಾನ ಮತ್ತು ಕಾರ್ಯಕರ್ತ ಬಂಧುಗಳಿಗೆ ಅಭಿನಂದನೆ ಸಮಾರಂಭವು ವೇಣೂರು ಕಾಮೆಟ್ಟು ಬಾಲಕೃಷ್ಣ ಭಟ್ ರವರ ಮನೆಯಲ್ಲಿ ನಡೆಯಿತು.ವೇಣೂರು ತಾಲೂಕು ಪಂಚಾಯತ್ ವ್ಯಾಪ್ತಿಯ ಕಾರ್ಯಕರ್ತರು ಮುಖಂಡರು ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಜಿ.ಪಂ.ಮಾಜಿ ಉಪಾಧ್ಯಕ್ಷ ಧರಣೇಂದ್ರ ಕುಮಾರ್, ಜಿ.ಪ ಮಾಜಿ ಸದಸ್ಯ ಶೇಖರ್ ಕುಕ್ಕೇಡಿ, ಜಯರಾಮ್ ಶೆಟ್ಟಿ ಖಂಡಿಗ, ಪ್ರಭಾಕರ್ ಹೆಗ್ಡೆ ಹಟ್ಟಾಜೆ, ಸತೀಶ್ ಹೆಗ್ಡೆ, ದಯಾನಂದ ದೇವಾಡಿಗ, ಶಶಿಧರ್ ಶೆಟ್ಟಿ ಮೂಡುಕೋಡಿ, ಅರವಿಂದ ಶೆಟ್ಟಿ ಖಂಡಿಗ, ಇಸ್ಮಾಯಿಲ್ ಕೆ.ಪೆರಿಂಜೆ, ಅಶ್ರಾಪ್ ಶಾಂತಿ ನಗರ, ರಾಕೇಶ್ ಕುಮಾರ್ ಮೂಡುಕೋಡಿ, ಸತೀಶ್ ಚಿಗುರು ಹೇಟವು, ಶಾಫಿ ಕಿರೋಡಿ, ವಿಮಲಾ ನಾಯಿಕ್, ಸೇಸ ಎಂ, ಸತೀಶ್ ಕಜಪಟ್ಯ, ಸುದರ್ಶನ್ ಮೂಡುಕೋಡಿ, ಗೋಪಾಲ ಹೊಸಪಟ್ನ, ಸುಂದರ ಮೂಡುಕೋಡಿ ಸೇರಿದಂತೆ ಹಿರಿಯ ಕಿರಿಯ ಮುಖಂಡರುಗಳು ಭಾಗವಹಿಸಿದ್ದರು.

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯೆವಸ್ಥಾನ ಸಮತಿಯ ಮಾಜಿ ಅಧ್ಯಕ್ಷ ಜಯರಾಮ್ ಶೆಟ್ಟಿ ಖಂಡಿಗ ವೇಣೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಸತೀಶ್ ಹೆಗ್ಡೆ ಕಾರ್ಯಕ್ರಮ ಸಂಯೋಜನೆ ಮಾಡಿದರು.ಕಾಮೆಟ್ಟು ಬಾಲಕೃಷ್ಣ ಭಟ್ ಸಭೆಯ ವ್ಯವಸ್ಥೆ ಮಾಡಿದರು.

LEAVE A REPLY

Please enter your comment!
Please enter your name here