ಶ್ರೀ.ಧ.ಮಂ.ಆಂ.ಮಾ. ಸಿ .ಬಿ ಎಸ್.ಇ ಶಾಲೆಯಲ್ಲಿ ಪೋಷಕರ ಸಭೆ

0

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಸಿ .ಬಿ ಎಸ್. ಇ ಶಾಲೆಯಲ್ಲಿ ಜೂ.10ರಂದು ಒಂದು ಮತ್ತು ಎರಡನೇ ತರಗತಿಯ ವಿದ್ಯಾರ್ಥಿಗಳ ಶಿಕ್ಷಕ ಪೋಷಕರ ಸಭೆ ನಡೆಯಿತು. ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.

ಅಶ್ವಿನಿ.ಹೆಚ್ ಮತ್ತು ಡಾ.ಧನೇಶ್ವರಿ ಪ್ರೊಫೆಸರ್ ಎಸ್ ಡಿ ಎಮ್ ಸ್ನಾತಕೋತ್ತರ ವಿಭಾಗ ಉಜಿರೆ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು. ‘ಮಕ್ಕಳನ್ನು ಸಶಕ್ತಗೊಳಿಸುವುದು’ ಹೇಗೆ ಎಂಬ ವಿಷಯದ ಬಗ್ಗೆ ಮಾಹಿತಿ ನೀಡಿದರು. ಮಮತಾ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಶಾಲಾ ಪ್ರಾಂಶುಪಾಲ ಮನಮೋಹನ್ ನಾಯಕ್ ರವರು ಶಾಲೆಯಲ್ಲಿ ಪ್ರಸ್ತುತ ವರ್ಷದಲ್ಲಿ ನಡೆಯುವ ಚಟುವಟಿಕೆಗಳ ಹಾಗೂ ಶಾಲಾ ನೀತಿ ನಿಯಮಗಳ ಬಗ್ಗೆ ಮಾಹಿತಿ ನೀಡಿದರು.

ವಿಷಯವಾರು ಶಿಕ್ಷಕರು ತಮ್ಮ ಪರಿಚಯ ಮಾಡಿ, ತಾವು ಭೋದಿಸುವ ಬೋಧನಾ ವಿಧಾನಗಳನ್ನು ಸಾದರಪಡಿಸಿದರು.

LEAVE A REPLY

Please enter your comment!
Please enter your name here