ಸುಲ್ಕೇರಿ: ಬಿಲ್ಲವ ಸಂಘದಿಂದ ಮನೆ ದುರಸ್ಥಿಗೆ ನೆರವು

0

ಸುಲ್ಕೇರಿ: ಬ್ರಹ್ಮ ಶ್ರೀ ಗುರುನಾರಾಯಣ ಸೇವಾ ಸಂಘ ಬ್ರಹ್ಮಗಿರಿ ವತಿಯಿಂದ ಮನೆ ನಿರ್ಮಾಣದ ಕೆಲಸಕ್ಕೆ ಆರ್ಥಿಕ ನೆರವು ಹಸ್ತಾಂತರಿಸಲಾಯಿತು.

ಸಂಘದ ಮಾರ್ಚ್ ತಿಂಗಳ ಮಾಸಿಕ ಸಭೆಯಲ್ಲಿ ಸಂಘದ ಸದಸ್ಯೆ ಸುಜಾತ ಪೂಜಾರ್ತಿಯವರ ಮನೆಯ ಮೇಲ್ಛಾವಣಿ ರಿಪೇರಿಗೆ ರೂ 5 ಸಾವಿರ ಸಹಾಯಹಸ್ತವನ್ನು ನೀಡಿ ಸಹಕರಿಸಲಾಯಿತು‌.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಕೊರಗಪ್ಪ ಪೂಜಾರಿ,ಉಪಾಧ್ಯಕ್ಷರುಗಳಾದ ಶಂಕರ ಪೂಜಾರಿ, ಯಶೋಧರ ಪೂಜಾರಿ, ಪ್ರಧಾನ ಕಾರ್ಯದರ್ಶಿ ಡೀಕಯ್ಯಪೂಜಾರಿ, ಕೋಶಾಧಿಕಾರಿ
ಹರೀಶ್ ಪೂಜಾರಿ , ನಿರ್ದೇಶಕರುಗಳಾದ ವಸಂತ ಪೂಜಾರಿ, ಸುನಿಲ್ ಪೂಜಾರಿ , ಕೀರ್ತನ್ ಪೂಜಾರಿ, ಗುರುರಾಜ್ ಪೂಜಾರಿ, ಪ್ರಕಾಶ್ ಪೂಜಾರಿ ಹಾಗೂ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here