ವಿಜಯ ರಾಘವ ಪಡುವೆಟ್ನಾಯರ ನಿಧನಕ್ಕೆ ಬೆಳ್ತಂಗಡಿ ಧರ್ಮಾಧ್ಯಕ್ಷರಿಂದ ಸಂತಾಪ

0

ಬೆಳ್ತಂಗಡಿ :ಹಿರಿಯ ಸಮಾಜ ಸೇವಕ ಕೊಡುಗೈ ದಾನಿ ಹಲವಾರು ಜನರಿಗೆ ಬದುಕಿನ ಮತ್ತು ಬಾಳುವ ದಿಕ್ಕನ್ನು ತೋರಿಸಿದ ದೀಮಂತ, ಉಜಿರೆ ಮತ್ತು ಬೆಳ್ತಂಗಡಿಯ ಸೌಹಾರ್ದತೆಯ ಸಂಕೇತ ವಿಜಯ ರಾಘವ ಪಡುವೆಟ್ನಾಯ ಇವರ ನಿಧನಕ್ಕೆ ಬೆಳ್ತಂಗಡಿ ಧರ್ಮಪ್ರಾಂತ್ಯ ಧರ್ಮಾಧ್ಯಕ್ಷರಾದ ಅತಿ ವಂ. ಪರಮ ಪೂಜ್ಯ ಲಾರೆನ್ಸ್ ಮುಕ್ಕುಯಿ ಅವರು ಸಂತಾಪವನ್ನು ವ್ಯಕ್ತಪಡಿಸಿದ್ದಾರೆ. ಇವರ ಅಗಲುವಿಕೆ ಸಹಿಸಿಕೊಳ್ಳುವ ಶಕ್ತಿ ಇವರ ಕುಟುಂಬಕ್ಕೆ ಲಭಿಸಲಿ ಎಂದು ಪರಮ ಪೂಜ್ಯರು ದೇವರಲ್ಲಿ ಪ್ರಾರ್ಥಿಸಿದ್ದಾರೆ.
ಧರ್ಮ ಪ್ರಾಂತ್ಯದಿಂದ ಹಿರಿಯ ಧರ್ಮಗುರುಗಳಾದ ಉಜಿರೆಯ ವಂದನಿಯ ಫಾ. ವರ್ಗೀಸ್ ಪುದಿಯೇಡತ್, ಕೆ ಎಸ್ ಎಂ ಸಿ ಎ ನಿರ್ದೇಶಕರಾದ ವಂ. ಫಾ| ಶಾಜಿ ಮಾತ್ಯು, ಪಿ ಆರ್ ಓ ಸೇಬಾಸ್ಟಿನ್ ಪಿ ಸಿ, ಜೋಬಿ ಮುಳವನ, ಟೈಟಸ್ ಮಾಧವತ್, ಬಿಜು ಕಳ್ಳಿಕಾಟ್ಟ್ ಮೃತರ ಕುಟುಂಬಕ್ಕೆ ಭೇಟಿ ಸಂತಾಪ ಸೂಚಿಸಿದರು.

LEAVE A REPLY

Please enter your comment!
Please enter your name here