ಜೇಸಿಐ ಬೆಳ್ತಂಗಡಿ ಮಂಜುಶ್ರೀಯ ಅಧ್ಯಕ್ಷರಾಗಿ ಜೇಸಿ ಹೆಚ್ ಜಿಎಫ್ ಶಂಕರ್ ರಾವ್ ಅಧಿಕಾರ ಸ್ವೀಕಾರ

0

ಬೆಳ್ತಂಗಡಿ: ವಾಣಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಶಂಕರ್ ರಾವ್, ನಿರ್ಗಮನ ಅಧ್ಯಕ್ಷರಾದ ಜೆಎಫ್ ಎಂ ಪ್ರಸಾದ್ ಬಿ.ಎಸ್ ಇವರಿಂದ ಪದಪ್ರದಾನಗೊಂಡು ಡಿಸೆಂಬರ್ 22ರಂದು ಜೇಸಿ ಭವನದಲ್ಲಿ ನಡೆದ ಪದಪ್ರದಾನ ಕಾರ್ಯಕ್ರಮದಲ್ಲಿ,ಜೆಸಿಐ ಬೆಳ್ತಂಗಡಿ ಮಂಜುಶ್ರೀಯ 46ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು.

ಈ ಕಾರ್ಯಕ್ರಮದಲ್ಲಿ ವಾಣಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಪಿ. ಕುಶಾಲಪ್ಪ ಗೌಡ ಮುಖ್ಯ ಅಭ್ಯಾಗತಾರಾಗಿ ಆಗಮಿಸಿ ಮಾತನಾಡುತ್ತ ನಿರಂತರ ಪ್ರಯತ್ನ ಮತ್ತು ಕ್ರಿಯಾಶೀಲತೆಯಿಂದ ಉನ್ನತ ವ್ಯಕ್ತಿತ್ವವನ್ನು ಸಂಪಾದಿಸಬಹುದು. ಜೆಸಿಐನಿಂದ ತರಬೇತಿ ಪಡೆದವರು ಸಮಾಜಮುಖಿಯಾಗಿ ಬೆಳೆದು ಶ್ರೇಷ್ಠ ಸ್ಥಾನಮಾನವನ್ನು ಪಡೆಯಲು ಸಾಧ್ಯ ಎಂದು ಹೇಳುತ್ತಾ ನೂತನ ಅಧ್ಯಕ್ಷರ ಸಾಧನೆಗಳ ಬಗ್ಗೆ ಮೆಚ್ಚುಗೆಯ ಮಾತನ್ನಾಡಿ ಶುಭ ಹಾರೈಸಿದರು.

ಘಟಕದ ಪೂರ್ವಧ್ಯಕ್ಷರಾದ ಜೇಸಿ ಸಂತೋಷ್ ಕೋಟ್ಯಾನ್, ಘಟಕದ ನಿಕಟ ಪೂರ್ವ ಅಧ್ಯಕ್ಷರಾದ ಜೆಎಫ್ ಎಂ ಸ್ವರೂಪ್ ಶೇಖರ್ ಇವರನ್ನು ಪೂರ್ವಧ್ಯಕ್ಷರ ಸಾಲಿಗೆ ಸೇರ್ಪಡೆ ಗೊಳಿಸಿದರು.

ಜೆಸಿಐ ಭಾರತದ ವಲಯ XV ರ ವಲಯಾಧ್ಯಕ್ಷರಾದ ಜೆಎಫ್ ಡಿ ಪುರುಷೋತ್ತಮ್ ಶೆಟ್ಟಿ ಮುಖ್ಯ ಅತಿಥಿಯಾಗಿ, ವಲಯ ಉಪಾಧ್ಯಕ್ಷರಾದ ಜೇಸಿ ಭರತ್ ಶೆಟ್ಟಿ ಮತ್ತು ವಲಯಾಡಿಳಿತ ಮಂಡಳಿಯ ನಿರ್ದೇಶಕರಾದ ಜೇಸಿ ಪ್ರಶಾಂತ್ ಲಾಯಿಲ ಉಪಸ್ಥಿತರಿದ್ದರು.

ಘಟಕದ ಪೂರ್ವಧ್ಯಕ್ಷರಾದ ಜೇಸಿ ಶ್ರೀನಾಥ್ ಕೆ.ಎಮ್, ಘಟಕ ಉಪಾಧ್ಯಕ್ಷರುಗಳಾದ ಜೇಸಿ ಹೆಚ್ ಜಿಎಫ್ ರಂಜಿತ್ ಎಚ್ ಡಿ, ಜೇಸಿ ಹೆಚ್ ಜಿಎಫ್ ಪ್ರೀತಮ್ ಶೆಟ್ಟಿ ಮತ್ತು ಸದಸ್ಯರಾದ ರಕ್ಷಿತ್ ಅಂಡಿಜೆ ಮಖ್ಯ ಅತಿಥಿಗಳನ್ನು ಪರಿಚಯಿಸಿದರು.

ಜೇಸಿ ಚಂದ್ರಹಾಸ್ ಬಳಂಜ ನೂತನ ಅಧ್ಯಕ್ಷರನ್ನು ಸಭೆಗೆ ಪರಿಚಯಿಸಿದರು. ಮಹಿಳಾ ವಿಭಾಗದ ಸಂಯೋಜಕಿ ಜೇಸಿ ಮಾಮಿತಾ ಸುಧೀರ್ ಹಾಗೂ ಜೂನಿಯರ್ ಜೇಸಿ ವಿಭಾಗದ ಅಧ್ಯಕ್ಷರಾದ ಜೇಸಿ ರಾಮಕೃಷ್ಣ ಶರ್ಮಾ ಅಧಿಕಾರ ಸ್ವೀಕರಿಸಿದರು.

ಪೂರ್ವಧ್ಯಕ್ಷರಾದ ಜೇಸಿ ಚಿದಾನಂದ ಇಡ್ಯಾ ಗಣ್ಯರನ್ನು ಬರಮಾಡಿಕೊಂಡರು, ನೂತನ ಕಾರ್ಯದರ್ಶಿ ಜೇಸಿ ಸುಧೀರ್ ಕೆ. ಎನ್ ಸರ್ವರಿಗೂ ಧನ್ಯವಾದ ಸಮರ್ಪಿಸಿದರು. ಜೇಸಿಐ ಬೆಳ್ತಂಗಡಿ ಮಂಜುಶ್ರೀಯ ಪೂರ್ವಾಧ್ಯಕ್ಷರುಗಳು, ಸದಸ್ಯರುಗಳು ಮತ್ತು ಜೇಸಿಐ ನ ಹಿತೈಷಿಗಳು ನೂತನ ತಂಡಕ್ಕೆ ಶುಭ ಹಾರೈಸಿದರು.

LEAVE A REPLY

Please enter your comment!
Please enter your name here