ಕೊಕ್ಕಡ : ಧರ್ಮಸ್ಥಳದಿಂದ ಕುಕ್ಕೇ ಸುಬ್ರಹ್ಮಣ್ಯ ಕಡೆಗೆ ಯಾತ್ರಾರ್ಥಿಗಳಾಗಿ ಹೋಗುತ್ತಿದ್ದ ಕೆ.ಎಸ್.ಆರ್.ಟಿ.ಸಿ.ಬಸ್ ಕೊಕ್ಕಡದ ಪಾರ್ಪಿಕಲ್ ಸಮೀಪ ಝೈವೊ ಕಾರ್ಗೆ ಡಿ.18ರಂದು ಡಿಕ್ಕಿ ಹೊಡೆದಿದೆ. ಬಸ್ನಲ್ಲಿದ್ದ ಕಮಲ ಮತ್ತು ಹೊಸಪೇಟೆ ಸಮೀಪದ ಲಿಂಗಪ್ಪ ಎಂವವರು ಮತ್ತು ಕಾರಿನಲ್ಲಿದ್ದ ನಿತ್ಯಶ್ರೀ, ವೆಂಕಟಕೃಷ್ಣ , ಸಂತೋಷ್, ದೇವಲಕ್ಷ್ಮೀ ಎಂಬವರು ಉಜಿರೆ ಆಸ್ಪತ್ರೆಗೆ ದಾಖಲಾಗಿದ್ದು, ಉಳಿದ ಇಬ್ಬರನ್ನು ಮಂಗಳೂರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ. ಪ್ರಕರಣ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.