ವೇಣೂರು: ಕರಿಮಣೇಲು ಗ್ರಾಮದ ಮಂಜನಬೆಟ್ಟು ಬಳಿ ಇರುವ ಪಾರೋಟ್ಟು ಎಂಬ ಸ್ಥಳದಲ್ಲಿ ನೂತನವಾಗಿ ಜೀರ್ಣೋದ್ಧಾರಗೊಳ್ಳಲಿರುವ ಶ್ರೀ ನಾಗಬ್ರಹ್ಮ ಪರಿವಾರ ಸಾನಿಧ್ಯಗಳಿಗೆ ರಾಮದಾಸ ಅಸ್ರಣ್ಣರವರ ನೇತೃತ್ವದಲ್ಲಿ ಶಿಲಾನ್ಯಾಸ ಕಾರ್ಯಕ್ರಮ ಹಾಗೂ ಮನವಿ ಪತ್ರ ಬಿಡುಗಡೆ ಕಾರ್ಯಕ್ರಮ ನೆರವೇರಿತು.
ಈ ಕಾರ್ಯಕ್ರಮದಲ್ಲಿ ಗಣ್ಯರಾದ ರಾಜವರ್ಮ ಬೈಲಂಗಡಿ, ರಾಜೇಂದ್ರ ಬಿ. ಪೆರಿಂಜೆ, ಜಿನರಾಜ್ ಜೈನ್ ಪದ್ಮಾಂಬ ರಾಮೆಟ್ಟು, ರವಿರಾಜ್ ಜೈನ್ ಪಾದೇಬೆಟ್ಟು, ರಾಮದಾಸ್ ನಾಯಕ್ ಮೂಂಕಾಡಿ, ಸನತ್ ಕುಮಾರ್ ಜೈನ್, ಸತೀಶ್ ಉಜಿರ್ದಡ್ದ, ಶ್ಯಾಮ ಹೆಗ್ಡೆ ಮಂಜನಬೆಟ್ಟು, ಸತ್ಯಕುಮಾರ್ ಹೆಗ್ಡೆ ಮಂಜನಬೆಟ್ಟು, ಗಂಗಾಧರ ಆಚಾರ್ಯ, ಮೇಘರಾಜ ಹೆಗ್ಡೆ ಮಂಜನಬೆಟ್ಟು, ಅರುಣ್ ಹೆಗ್ಡೆ ಮಂಜನಬೆಟ್ಟು, ಗಂಗಾಧರ ಮೂಲ್ಯ, ಸುದೀಶ್ ಹೆಗ್ಡೆ ಕಟ್ಟೆಮನೆ ಮೂಡಬಿದ್ರೆ, ರತ್ನಾಕರ ಹೆಗ್ಡೆ ಮಂಜನಬೆಟ್ಟು, ಅಣ್ಣಿ ಪೂಜಾರಿ ಪೆರ್ಜಾಲು, ರಮೇಶ್ ಹೆಗ್ಡೆ, ಪ್ರವೀಣ್ ಹೆಗ್ಡೆ ಕುಕ್ಕಾಜೆ, ವಸಂತ ಪೂಜಾರಿ, ನೀಲಯ್ಯ , ಅಮ್ಮು ಮೇರಾ, ಯಶವಂತ್ ಕಟ್ಟೆ, ಸುರೇಂದ್ರ ಜಾರಿಗೆದಡಿ, ಶೋಭಾ ಹೆಗ್ಡೆ, ವಸಂತಿ ಹೊರ್ಜಲ್, ಮಮತಾ ಹೆಗ್ಡೆ, ಸುರೇಖಾ ಹೊರ್ಜಾಲ್, ವಿನೋದ ಹೆಗ್ಡೆ ಹಾಗೂ ಊರ ಪರಊರ ಮಹನೀಯರು, ಪ್ರಮುಖರು, ಸರ್ವ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

