Site icon Suddi Belthangady

ಬೆಳಾಲು: ಸಹಕಾರ ಸಂಘದ ಸದಸ್ಯರ ಕಲ್ಯಾಣ ನಿಧಿಯಿಂದ ವೈದ್ಯಕೀಯ ನೆರವು

ಬೆಳಾಲು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರ ಕಲ್ಯಾಣ ನಿಧಿಯಿಂದ ಸಂಘದ ಸದಸ್ಯ ಮುತ್ತಪ್ಪ ಗೌಡ ಅವರ ಹೃದಯ ಶಸ್ತ್ರ ಚಿಕಿತ್ಸೆಗೆ ರೂ 25 ಸಾವಿರ ವೈದ್ಯಕೀಯ ನೆರವನ್ನು ಸಂಘದ ಅಧ್ಯಕ್ಷ ಹೆಚ್. ಪದ್ಮ ಗೌಡ ಹಸ್ತಾಂತರಿಸಿದರು. ಸಂಘದ ಮುಖ್ಯ ಕಾರ್ಯನಿರ್ವಾಹಣಾ ಧಿಕಾರಿ ನಾರಾಯಣ ಗೌಡ, ನಿರ್ದೇಶಕರಾದ ದಾಮೋದರ ಗೌಡ, ಸುರೇಂದ್ರ ಗೌಡ, ರಮೇಶ್ ಗೌಡ, ರಾಜಪ್ಪ ಗೌಡ, ಶೀನಪ್ಪ ಗೌಡ, ಪ್ರವೀಣ್ ವಿಜಯ್, ಸುಕನ್ಯಾ, ಹೇಮಾಲತಾ, ಚೀಂಕ್ರ, ಸಿಬ್ಬಂದಿಗಳು ಉಪಸ್ಥಿತರಿದ್ದರು.

Exit mobile version