ಬಳ್ಳಮಂಜ: ತುಳುನಾಡಿನ ಹಿತಿಹಾಸ ಪ್ರಸಿದ್ದ ನಾಗಕ್ಷೇತ್ರ ಬಳ್ಳಮಂಜ. ಈ ಕ್ಷೇತ್ರದ ಸೊಬಗಿಗೆ ತಕ್ಕಂತೆ ಇಲ್ಲಿ ಶ್ರೀ ಅನಂತೇಶ್ವರ ದೇವರ ದಿವ್ಯ ಸನ್ನಿಧಿ ಇದ್ದು, ಭಕ್ತ ಜನರ ಇಷ್ಟಾರ್ಥವನ್ನು ಈಡೇರಿಸುವ ಶ್ರದ್ದಾ ಕೇಂದ್ರವಾಗಿರುತ್ತದೆ. ತುಳುನಾಡಿನ ಇತಿಹಾಸದ ಪ್ರಕಾರ ಬಳ್ಳಮಂಜ ಎಂದರೆ ಬೆಳ್ಳಿಯ ಹುತ್ತ ಎಂದು ವ್ಯಾಖ್ಯಾನಿಸುತ್ತಾರೆ. ವರ್ಷಂಪ್ರತಿಯಂತೆ ಜರಗುವ ಷಷ್ಠಿ ಮಹೋತ್ಸವ ಬಹಳ ವಿಜೃಂಭಣೆಯಿಂದ ಸಾವಿರಾರು ಭಕ್ತಾದಿಗಳ ಸೇರುವಿಕೆಯಿಂದ ಕಣ್ಮಣ ಸೆಳೆದ ಬ್ರಹ್ಮರಥೋತ್ಸವ ನಡೆಯಿತು.
ನ.25ರಂದು ಬೆಳಿಗ್ಗೆ 8ಕ್ಕೆ ಕೊಪ್ಪರಿಗೆ ಮುಹೂರ್ತ, ಅಂಗ ಪ್ರದಕ್ಷಿಣೆ,10ರಿಂದ ವೇಣುವದಾನ ವಿದ್ವಾನ್ ಶ್ರೀ ಕೃಷ್ಣಗೋಪಾಲ ಪುಂಜಾಲಕಟ್ಟೆ ಮತ್ತು ಬಳಗ ದಿಂದ, 12.30ಮಹಾ ಪೂಜೆ, ಅನ್ನಸಂತರ್ಪಣೆ, ಸಂಜೆ 7ರಿಂದ ರಂಗ ಪೂಜೆ, 8ಕ್ಕೆ ಪಂಚಮಿ ಉತ್ಸವ ನಡೆಯಿತು.
ನ. 26ರಂದು ಬೆಳಿಗ್ಗೆ 7ರಿಂದ ಷಷ್ಠಿ ಉತ್ಸವ ಪ್ರಾರಂಭಗೊಂಡು ಗಂಟೆ 11ಕ್ಕೆ ಬ್ರಹ್ಮರಥೋತ್ಸವ ನಡೆಯಿತು. ಅಪರಾಹ್ನ 12.30ಕ್ಕೆ ಮಹಾಪೂಜೆ, ಮಹಾ ಅನ್ನಸಂತರ್ಪಣೆ, ರಾತ್ರಿ 7ಕ್ಕೆ ಕಟ್ಟೆ ಪೂಜೆ, ದರ್ಶನ ಬಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಡಾ. ಎಂ. ಹರ್ಷ ಸಂಪಿಗೆತ್ತಾಯ, ಶಾಸಕ ಹರೀಶ್ ಪೂಂಜಾ, ಶಿವಪ್ರಸಾದ್ ತಂತ್ರಿ,ಅರ್ಚಕ ವೃಂದ, ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿ ದೇವರ ಗಂಧ ಪ್ರಸಾದ ಸ್ವೀಕರಿಸಿದರು.

