
ಕಡಿರುದ್ಯಾವರ: ಗ್ರಾಮದ ಹೇಡ್ಯದಿಂದ ಕುಕ್ಕಾವುವರೆಗೆ ಅಲ್ಲಲ್ಲಿ ರಸ್ತೆ ಹಾಳಾಗಿದ್ದು, ಎರ್ಮಾಲ್ ಪಲ್ಕೆ ಬಳಿ ಮೋರಿ ಕುಸಿದು ವಾಹನ ಸವಾರರಿಗೆ ತುಂಬ ತೊಂದರೆಯಾಗುತ್ತಿತ್ತು. ಇದನ್ನು ಕಂಡು ಕಡಿರುದ್ಯಾವರ ಪಣಿಕಲ್ ನವೀನ್ ಅವರು ತನ್ನ ಸ್ವಂತ ಖರ್ಚಿನಿಂದ ಹಿಟಾಚಿ ಮತ್ತು ಟಿಪ್ಪರ್ ಮೂಲಕ ಕೆಟ್ಟುಹೋದ ರಸ್ತೆಗೆ ಮಣ್ಣು ಹಾಕಿ ಮಾದರಿಯಾಗಿದ್ದಾರೆ. ಅವರು ಈ ಹಿಂದೆ ಕಾನರ್ಪ ಬಸ್ ಸ್ಟ್ಯಾಂಡ್ ಸಮೀಪ ಚರಂಡಿಯನ್ನು ದುರಸ್ಥಿಗೊಳಿಸಿದ್ದರು.

