ಗುರಿಪಳ್ಳ: ಸರಕಾರಿ ಉನ್ನತೀಕರಿಸಿದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕನಕದಾಸ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಶಾಲಾ ಸ್ಥಳ ದಾನಿಗಳಾದ ಪಾಂಡುರಂಗ ಮರಾಠೆ ಶಾಲೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷೆ ಸಾಂಬಾ ಹಾಗೂ ಶಾಲಾ ಶಿಕ್ಷಕ ಸುರೇಶ್ ಮತ್ತು ಊರವರು ಬಂದಿದ್ದರು. ಮಕ್ಕಳು ಕನಕದಾಸರ ಬಗ್ಗೆ ಮಾತನಾಡಿ ಶಿಕ್ಷಕರು ಕನಕದಾಸ ಜಯಂತಿಯ ಮಹತ್ವವನ್ನು ತಿಳಿಸಿದರು.
ಗುರಿಪಳ್ಳ: ಸ. ಉ. ಕಿ. ಪ್ರಾ. ಶಾಲೆಯಲ್ಲಿ ಕನಕದಾಸ ಜಯಂತಿ ಆಚರಣೆ

