ಬೆಳ್ತಂಗಡಿ: ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅ. 25ರಂದು IGNITE 2K25 ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ತಾಲೂಕಿನ ಅನೇಕ ಕಾಲೇಜುಗಳು ಆಗಮಿಸಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ.ಸುರೇಶ್ ವಿಟ್ಲ ಹಾಗೂ ಉದ್ಘಾಟಕರಾಗಿ ವಿಷ್ಣು ಪ್ರಕಾಶ್ ಎಂ. ಅವರು ಆಗಮಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಾಗೂ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ವೇದಿಕೆಯಲ್ಲಿ ನಿರ್ವಹಣಾ ವಿಭಾಗದ ಮುಖ್ಯಸ್ಥೆ ಪ್ರೊ. ರಶ್ಮಿ ಹೆಚ್ ಹಾಗೂ IQAC ನ ಸಂಚಾಲಕ ಡಾ. ಕುಶಾಲಪ್ಪ ಎಸ್. ಹಾಗೂ ಡಾ. ದಿವ್ಯ ಪ್ರಭು ಉಪಸ್ಥಿತರಿದರು. ಹಾಗೂ IGNITE ಸಂಚಾಲಕ ಸಂದೇಶ್ ಎಮ್.ಎಸ್. ಹಾಗೂ ನವ್ಯ ಅಂತಿಮ ಬಿಬಿಎ, ನಿರ್ವಹಣಾ ವಿಭಾಗದ ಅಧ್ಯಕ್ಷ ಪ್ರಥಮ್ ಹಾಗೂ ಉಪಾಧ್ಯಕ್ಷ ಕುಶಲ ಅಂತಿಮ ಬಿ.ಬಿ.ಎ. ಅವರು ಉಪಸ್ಥಿತರಿದ್ದರು. ಭಾಗವಹಿಸುವ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು, ಕಾಲೇಜಿನ ಎಲ್ಲಾ ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು. ಹಾಗೂ ಅನೇಕ ರೀತಿಯ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

