Site icon Suddi Belthangady

ಬಳಂಜ: ಸ. ಉ.ಪ್ರಾ. ಶಾಲಾ ಶಾಶ್ವತ ಕಾಮಗಾರಿಗಳ ಹಸ್ತಾಂತರ ಕಾರ್ಯಕ್ರಮ

ಬೆಳ್ತಂಗಡಿ: ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಇಂಗ್ಲಿಷ್ ಶಿಕ್ಷಣ ಸಿಗಬೇಕು ಮತ್ತು ಬಳಂಜ ಶಾಲೆಯನ್ನು ಬೆಳಗಿಸಬೇಕು ಎಂಬ ಬಳಂಜ ಶಾಲಾ ಹಳೆವಿದ್ಯಾರ್ಥಿಗಳ , ಊರವರ ಕಾಳಜಿ ಸಮಾಜಕ್ಕೆ ಮಾದರಿಯಾಗಿದೆ. ಶೈಕ್ಷಣಿಕ ವಿಷಯಗಳಲ್ಲಿ ರಾಜಕೀಯ ಬರಬಾರದು ಅದಕ್ಕೆ ನಾನು ವಿರೋಧವಿದ್ದೇನೆ. ಸರಕಾರದ ಅನುದಾನ ಕಾಯುವುವುದಕ್ಕಿಂತ ಹಳೆವಿದ್ಯಾರ್ಥಿಗಳು ,ಊರವರರು ಶಾಲೆಯ ಬೆಳವಣಿಗೆಗಳಲ್ಲಿ ಪ್ರಮುಖ ಪಾತ್ರ ವಹಿಸಿದಾಗ ಶಾಲೆ ಬೆಳಗಲು ಸಾದ್ಯ ಎಂದು ಶಾಸಕ ಹರೀಶ್ ಪೂಂಜಾ ಹೇಳಿದರು. ಅವರು ಅ. 19ರಂದು ಸ.ಉ.ಹಿ. ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಅಮೃತ ಮಹೋತ್ಸವದ ಪ್ರಯುಕ್ತ ದಿ ಅನಿಲ್ ನಾಯ್ಗ ಸ್ಮರಣಾರ್ಥವಾಗಿ ಅಶ್ವಥ್ ಹೆಗ್ಡೆ ಫೌಂಡೆಶನ್ ವತಿಯಿಂದ ವೆಟ್ರಿಫೈಡ್ ಟೈಲ್ಸ್ ಅಳವಡಿಕೆ, ಸ್ವಾಗತ ಗೋಪುರ ನವೀಕರಣ, ನೆಲಹಾಸು ಅಳವಡಿಕೆ ಕಾಮಗಾರಿಗಳ ಉದ್ಘಾಟನೆ ನೆರವೇರಿಸಿ ಮಾತನಾಡಿ ಬಳಂಜ ನನ್ನ ಸ್ವಂತ ಊರಿಗೆ ಸಮಾನವಾದ ಗ್ರಾಮ ಇಲ್ಲಿನ ದೇವಸ್ಥಾನ ಜೀರ್ಣೋದ್ಧಾರದ ಭಾಗ್ಯ ಸಿಕ್ಕಿತ್ತು, ಮತ್ತೆ ಶಾಲೆಯ ಅಮೃತ ಮಹೋತ್ಸವ ಸು ಸಂದರ್ಭ ಬಂದಿದೆ.

ಇಲ್ಲಿನ ರಸ್ತೆಗಳ ಅಬಿವ್ರುದ್ದಿ ಮನವಿ ಇದ್ದು ಇದನ್ನು ಮುಂದಿನ ಪ್ರಥಮ ಆದ್ಯತೆಯಲ್ಲಿ ಮಾಡಿಕೊಡಲಾಗುವುದು, ಹೈಸ್ಕೂಲ್ ಕಟ್ಟಡಕ್ಕೆ ಅನುದಾನ ನೀಡಲಾಗುವುದಲ್ಲದೆ ಮೊದಲನೆಯ ಹಂತವಾಗಿ ರೂ. 10 ಲಕ್ಷ ವೆಚ್ಚದಲ್ಲಿ ಮಕ್ಕಳ ತಂಗುದಾಣ ಮತ್ತು ಶಾಲಾ ಮುಂಭಾಗದ ಇಂಟರ್ ಲಾಕ್ ಅಳವಡಿಸಿಕೊಡಲಾಗುವುದು ಎಂದರು.

ಶಾಲಾ ಹಳೆ ವಿದ್ಯಾರ್ಥಿ ಅಶ್ವಥ್ ಹೆಗ್ಡೆಯವರು ಸುಮಾರು 15 ಲಕ್ಷ ವೆಚ್ಚದಲ್ಲಿ ಶಾಲಾ ನವೀಕರಣ ಮಾಡಿಸಿದ್ದು ಇವರ ಶಾಲೆಯ ಮೇಲಿನ ಪ್ರೀತಿ ಇತರರಿಗೆ ಮಾದರಿ ಎಂದರು.

ಉಜಿರೆ ಎಸ್.ಡಿ.ಎಂ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಬಿ. ಎ.ಕುಮಾರ್ ಹೆಗ್ಡೆ ಮಾತನಾಡಿ ಸಮಾಜದ ಮೇಲೆ ಅತೀವ ಕಳಕಳಿ ಇದ್ದ ಅನಿಲ್ ನಾಯ್ಗ ರವರ ಸ್ಮರಣಾರ್ಥ ಬಳಂಜ ಶಾಲೆಯಲ್ಲಿ ಅನೇಕ ಅಬಿವ್ರುದ್ದಿ ಕಾರ್ಯ ಆಗಿದೆಯೆಂದರೆ ಇದು ಅವರ ಸಮಾಜ ಸೇವೆಗೆ ಕೊಟ್ಟ ಗೌರವವಾಗಿದೆ ಎಂದರು.

ಅಶ್ವಥ್ ಹೆಗ್ಡೆ ಫೌಂಡೇಶನ್ ನ ಅದ್ಯಕ್ಷ ವಿವಿಧ ಕಾಮಗಾರಿಗನ್ನು ಕೊಡುಗೆ ನೀಡಿದ ಅಶ್ವಥ್ ಹೆಗ್ಡೆ ಕುಳೆಂಜಿರೋಡಿ ಗುತ್ತು ಅದ್ಯಕ್ಷತೆ ವಹಿಸಿ ಮಾತನಾಡಿ ಊರಿನ ಅನೇಕ ಅಭಿವೃದ್ಧಿಯ ಕನಸು ಕಾಣುತ್ತಿದ್ದ ದಿ.ಅನಿಲ್ ನಾಯ್ಗ ರವ ಕನಸನ್ನು ನನಸು ಮಾಡಬೇಕು ಎನ್ನುವ ಅವಕಾಶ ಈಗ ಸಿಕ್ಕಿದೆ. ಶಾಲೆ ಅಮೃತ ಮಹೋತ್ಸವ ಹೊಸ್ತಿಲಲ್ಲಿ ಇರುವ ಸಂದರ್ಭದಲ್ಲಿ ಅನೇಕ ಅಭಿವೃದ್ಧಿ ಕಾರ್ಯ ಮಾಡಲಿಕ್ಕಿದೆ. ಇದಕ್ಕೆ ಊರವರು ಜೊತೆಯಾಗಬೇಕು. ಅಮೃತ ಮಹೋತ್ಸವವನ್ನು ಮಾದರಿ ಕಾರ್ಯಕ್ರಮವಾಗಿ ಮಾಡೋಣ ಎಂದರು.

ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ ಸರಕಾರಿ ಶಾಲೆಯ ಅಭಿವೃದ್ಧಿಗೆ ಹಳೆವಿದ್ಯಾರ್ಥಿಗಳು ಮುಂದೆ ಬಂದಿರುವುದು ಅಭಿನಂದನೀಯ. ಉದ್ಯಮಿ ಅಶ್ವಥ್ ಹೆಗ್ಡೆಯವರ ಸೇವೆಯೊಂದಿಗೆ ನಾನು ಕೈಜೋಡಿಸುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಯುವ ಉದ್ಯಮಿ ಪ್ರಶಾಂತ್ ಬೆಳ್ತಂಗಡಿ, ಪತ್ರಕರ್ತ ತುಕರಾಮ್ , ಶಶಿಕಿರಣ್ ಅನಿಲ್ ನಾಯ್ಗ, ಅವೃತ ಮಹೋತ್ಸವದ ಗೌರವ ಮಾರ್ಗದರ್ಶಕ ವಸಂತ ಸಾಲ್ಯಾನ್ , ಅರುಣ್ ಹೆಗ್ಡೆ ಕುಳೆಂಜಿರೋಡಿ ಗುತ್ತು, ಅಮೃತ ಮಹೋತ್ಸವದ ಗೌರವಾದ್ಯಕ್ಷ ಸುರೇಶ್ ಶೆಟ್ಟಿ ಕುರೇಲ್ಯ, ಅದ್ಯಕ್ಷ ಚಂದ್ರಶೇಖರ ಪಿ.ಕೆ, ಕಾರ್ಯಾದ್ಯಕ್ಷ ಬಳಂಜ ಶಿಕ್ಷಣ ಟ್ರಸ್ಟ್ ರಿ ಅದ್ಯಕ್ಷ ಮನೋಹರ್ ಬಳಂಜ, ಕಾರ್ಯಾದ್ಯಕ್ಷ ಬಳಂಜ ಶಿಕ್ಷಣ ಟ್ರಸ್ಟ್ ನ ಉಪಾಧ್ಯಕ್ಷ ವಿನು ಬಳಂಜ, ಬಳಂಜ ಗ್ರಾ.ಪಂ ಅದ್ಯಕ್ಷೆ ಶೋಬಾ ಕುಲಾಲ್, ಎಸ್. ಡಿ. ಎಂ. ಸಿ ಅಧ್ಯಕ್ಷ ರತ್ನರಾಜ್, ಬಳಂಜ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಶೀತಲ್ ಪಡಿವಾಳ್, ಹಳೆವಿದ್ಯಾರ್ಥಿ ಸಂಘದ ಅದ್ಯಕ್ಷ ಹರೀಶ್ ವೈ, ಉಮಾಮಹೇಶ್ವರ ಯುವಕ ಮಂಡಲ ಅದ್ಯಕ್ಷ ಸುಕೇಶ್ ಪೂಜಾರಿ ಹಾನಿಂಜ, ಜ್ಯೋತಿ ಮಹಿಳಾ ಮಂಡಲದ ಅದ್ಯಕ್ಷೆ ಚೇತನಾ ಜೈನ್, ಪ್ರೌಢಶಾಲಾ ಮುಖ್ಯೋಪಾದ್ಯಾಯಿನಿ ಸುಲೋಚನ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ರಂಗಸ್ವಾಮಿ ಉಪಸ್ಥಿತರಿದ್ದರು.

ನಾದ ಮಣಿನಾಲ್ಕೂರು ಮತ್ತು ಅಕ್ಷತಾ ಕುಡ್ಲ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಹಳೆ ವಿದ್ಯಾರ್ಥಿಗಳ ಸಮಾಗಮ ಕಾರ್ಯಕ್ರಮ ನಡೆಯಿತು. ಹರೀಶ್ ವೈ ಸ್ವಾಗತಿಸಿ, ಖ್ಯಾತ ವಾಗ್ಮಿ ದಾಮೋದರ ಶರ್ಮ ಕಾರ್ಯಕ್ರಮ ನಿರೂಪಿಸಿದರು, ಮುಖ್ಯೋಪಾಧ್ಯಾಯ ರಂಗಸ್ವಾಮಿ ವಂದಿಸಿದರು.

Exit mobile version