Site icon Suddi Belthangady

ಶಿರ್ಲಾಲು: ಬಿಲ್ಲವ ಸಂಘಟನೆಗಳ ನೇತೃತ್ವದಲ್ಲಿ ನಡೆದ ಕೆಸರುಗದ್ದೆ ಕ್ರೀಡಾಕೂಟ

ಶಿರ್ಲಾಲು: ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಶಿರ್ಲಾಲು – ಕರಂಬಾರು ನೇತೃತ್ವದಲ್ಲಿ ಯುವ ಬಿಲ್ಲವ ವೇದಿಕೆ, ಮಹಿಳಾ ಬಿಲ್ಲವ ವೇದಿಕೆ ಹಾಗೂ ಯುವವಾಹಿನಿ ಸಂಚಲನ ಸಮಿತಿಯ ಸಹಕಾರದಲ್ಲಿ ‘ಕೆಸರ್ ದ ಕಂಡೊಡು ಪರ್ಬೊದ ಗೊಬ್ಬು’ ಎಂಬ ಹೆಸರಿನಲ್ಲಿ ಕೆಸರು ಗದ್ದೆ ಕ್ರೀಡಾಕೂಟ ಕಟ್ರಬೈಲು ಆನಂದ ಪೂಜಾರಿಯವರ ಗದ್ದೆಯಲ್ಲಿ ಅ. 19ರಂದು ನಡೆಯಿತು.

ಕ್ರೀಡಾಕೂಟವನ್ನು ಬೆಳ್ತಂಗಡಿ ತಾಲ್ಲೂಕು ಆಸ್ಪತ್ರೆಯ ಫಾರ್ಮಸಿ ಅಧಿಕಾರಿ ಚಂದ್ರಶೇಖರ್ ಸೂರ್ಲೋಡಿ ಉದ್ಘಾಟಿಸಿ ಮಾತನಾಡಿ, ‘ಗದ್ದೆಯಿಂದ ದೂರವಾಗುತ್ತಿರುವ ಇಂದಿನ ಯುವ ಜನಾಂಗಕ್ಕೆ ಗದ್ದೆಯನ್ನು ಪರಿಚಯಿಸಿ ಪ್ರೀತಿ ಬೆಳೆಸುವಂತೆ ಮಾಡುವಲ್ಲಿ ಕೆಸರು ಗದ್ದೆ ಕ್ರೀಡೆ ಇಂದು ಅಗತ್ಯವಾಗಿದೆ.

ಮಕ್ಕಳು, ಮಹಿಳೆಯರು, ಯುವಕರು, ವಯಸ್ಕರು ಎಲ್ಲರೂ ಸೇರಿ ಪಾಲ್ಗೊಳ್ಳುವ ಕ್ರೀಡೆಯಾಗಿ ಈ ಕ್ರೀಡೆ ಜನಪ್ರಿಯವಾಗುತ್ತಿದೆ. ಅನೇಕ ಸಮಾಜ ಮುಖಿ ಚಟುವಟಿಕೆಯ ಜತೆಗೆ ನಿರಂತರ 12 ವರ್ಷಗಳಿಂದ ಕೆಸರು ಗದ್ದೆ ಕ್ರೀಡೆಯನ್ನು ತನ್ನ ಭಾಗವಾಗಿ ಮಾಡಿಕೊಂಡು ಬಂದಿರುವ ಶಿರ್ಲಾಲು ಸಂಘದ ಕಾರ್ಯ ಶ್ಲಾಘನೀಯ’ ಎಂದರು.

ಬ್ರಹ್ಮ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ  ಶಿರ್ಲಾಲು – ಕರಂಬಾರು ಇದರ ಅಧ್ಯಕ್ಷ ಸದಾಶಿವ ಪೂಜಾರಿ ಊರ ಅಧ್ಯಕ್ಷತೆ ವಹಿಸಿದ್ದರು. ಕೃಷಿಕ ಸುಂದರ ಪೂಜಾರಿ ಕಲ್ಲಾಜೆ, ಬೆಳ್ತಂಗಡಿ ಬೆಸ್ಟ್ ಪೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ, ಬೆಳ್ತಂಗಡಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಮಾಜಿ ಅಧ್ಯಕ್ಷ ಚಿದಾನಂದ ಪೂಜಾರಿ ಎಲ್ದಕ್ಕ, ಬಿಜೆಪಿ ಬೆಳ್ತಂಗಡಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ಶಿರ್ಲಾಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುಧೀರ್ ಸುವರ್ಣ, ಆನಂದ ಪೂಜಾರಿ ಕಟ್ರಬೈಲು, ಬೆಳ್ತಂಗಡಿ. ಯುವವಾಹಿನಿ ಘಟಕದ ಅಧ್ಯಕ್ಷ ಗುರುರಾಜ್ ಗುರುಪಳ್ಳ, ಕಾರ್ಯದರ್ಶಿ ಮಧುರಾ ರಾಘವ, ನಟ ನಿರ್ದೇಶಕ ಅನೀಶ್ ಅಮೀನ್ ವೇಣೂರು, ಗ್ರಾಮ ಪಂಚಾಯತಿ ಉಪಾಧ್ಯಕ್ಷ ಸೋಮನಾಥ ಬಳ್ಳಿದಡ್ದ, ಬಳಂಜ ಬಿಲ್ಲವ ಸಂಘದ ಅಧ್ಯಕ್ಷ ಸಂತೋಷ್ ಕೋಟ್ಯಾನ್,  ಬೆಳ್ತಂಗಡಿ ತಾಲೂಕು ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಪ್ರಸಾದ್ ಎಂ.ಕೆ. ಮುಂತಾದವರು ಭಾಗವಹಿಸಿ ಶುಭ ಹಾರೈಸಿದರು.

ಕಬಡ್ಡಿ, ವಾಲಿಬಾಲ್, ಹಗ್ಗ ಜಗ್ಗಾಟ, ತ್ರೋಬಾಲ್ ಮುಂತಾದ ಗುಂಪು ಆಟಗಳ ಜತೆ ಅನೇಕ  ಓಟದ ಸ್ಪರ್ಧೆಗಳು ನಡೆದವು.ಸಂಘದ ಉಪಾಧ್ಯಕ್ಷ ಹರೀಶ್ ಕಲ್ಲಾಜೆ, ಕಾರ್ಯದರ್ಶಿ ದಿನೇಶ್ ಕರ್ದೊಟ್ಟು, ನಿಕಟ ಪೂರ್ವಾಧ್ಯಕ್ಷ ಪ್ರವೀಣ್ ಪಾಲನೆ, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಜ್ಞಾನೇಶ್ ಕಟ್ಟ, ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷೆ ಶೋಭಾ ಶುಭಕರ, ಯುವವಾಹಿನಿ ಸಂಚಲನ ಸಮಿತಿ ಅಧ್ಯಕ್ಷ ಯತೀಶ್ ಪೂಜಾರಿ, ಮಾಜಿ ಅಧ್ಯಕ್ಷರಾದ ಜಯ ಪೂಜಾರಿ, ಪ್ರಕಾಶ್ ಕಟ್ರಬೈಲು, ವಿಜಯ ಹೇಡ್ಯದಡ್ಡ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಸಹಕರಿಸಿದರು.Boxಬಿಲ್ಲವರ ಪ್ರತಿಯೊಂದು ಕಾರ್ಯಗಳು ಈ ಗ್ರಾಮೀಣ ಪ್ರದೇಶದಲ್ಲಿ ಅತ್ಯಂತ ಅಚ್ಚುಕಟ್ಟಾಗಿ ನಡೆಯುತ್ತಿದೆ.

ಬಿಲ್ಲವ ಸಂಘಟನೆ ಪ್ರಬಲವಾಗಿದ್ದರೂ ಸಂಘಟನೆಗೆ ಸಮುದಾಯ ಭವನದ ಕೊರತೆಯಿದೆ. ಮುಂದಿನ ದಿನಗಳಲ್ಲಿ ಸಮುದಾಯ ಭವನಕ್ಕೆ ನನ್ನ ಮಾವನ ಹೆಸರಿನಲ್ಲಿ ₹ 1 ಲಕ್ಷ ನೀಡುವುದಾಗಿ ಬೆಳ್ತಂಗಡಿ ಬೆಸ್ಟ್ ಪೌಂಡೇಶನ್ ಅಧ್ಯಕ್ಷ  ರಕ್ಷಿತ್ ಶಿವರಾಂ ಹೇಳಿದರು.

ಶಿರ್ಲಾಲಿನಲ್ಲಿ ಬಿಲ್ಲವ ಸಂಘಟನೆಗಳಿಂದ ನಡೆದ 12 ನೇ ವರ್ಷದ ಕೆಸರು ಗದ್ದೆ ಕ್ರೀಡಾಕೂಟದಲ್ಲಿ ಅನೀಶ್ ಅಮೀನ್ ವೇಣೂರು ಅವರನ್ನು ಸನ್ಮಾನಿಸಲಾಯಿತು.

Exit mobile version