
ಬೆಳ್ತಂಗಡಿ : ನವಶಕ್ತಿ ಬರೋಡ ಶಶಿಧರ್ ಶೆಟ್ಟಿಯವರ ತಾಯಿ ಕಾಶಿ ಶೆಟ್ಟಿಯವರು ಇಂದು ಬೆಳಗ್ಗೆ ಸ್ವಗ್ರಹದಲ್ಲಿ ನಿಧನರಾಗಿದ್ದು, ಇವರ ಅಂತ್ಯಕ್ರಿಯೆಯು ಗುರುವಾಯನಕೆರೆ ಶಕ್ತಿನಗರದ ನವಶಕ್ತಿಯಲ್ಲಿ ನೆರವೇರಿದೆ. ಗಣ್ಯಾತಿ ಗಣ್ಯರು, ಬಂಧು ಬಳಗದವರು ಬಂದು ಅಂತಿಮ ನಮನ ಸಲ್ಲಿಸಿದ್ದು, ಸಂಜೆ 6.30ಗಂಟೆ ಸುಮಾರಿಗೆ ಅಂತಿಮ ವಿಧಿ ವಿಧಾನಗಳು ಈಡೇರಿ ನವಶಕ್ತಿ ಕಾಶಿ ಶೆಟ್ಟಿಯವರು ಪಂಚಭೂತಗಳಲ್ಲಿ ಲೀನರಾಗಿದ್ದಾರೆ.