Site icon Suddi Belthangady

ಬುರುಡೆ ಪ್ರಕರಣದ ಆರೋಪಿ ಚಿನ್ನಯ್ಯ ಬೆಳ್ತಂಗಡಿ ಕೋರ್ಟ್ ನಲ್ಲಿ ಹೇಳಿಕೆ ಮುಗಿಸಿ ವಾಪಾಸ್-ನ್ಯಾಯಾಧೀಶರ ಮುಂದೆ ಮುಚ್ಚಿದ ಕೋರ್ಟ್ ನಲ್ಲಿ ಹೇಳಿಕೆ ದಾಖಲು

ಬೆಳ್ತಂಗಡಿ: ಬುರುಡೆ ಪ್ರಕರಣದ ಆರೋಪಿ ಚಿನ್ನಯ್ಯ ಮುಚ್ಚಿದ ಕೋರ್ಟ್ ನಲ್ಲಿ 183 ಬಿ ಎನ್ ಎಸ್ ಎಸ್ ರಡಿ ಮುಚ್ಚಿದ ಕೋರ್ಟ್ ನಲ್ಲಿ ತನ್ನ ಸ್ವ ಇಚ್ಛಾ ಹೇಳಿಕೆ ನೀಡಿ ವಾಪಾಸಾಗಿದ್ದಾರೆ.
ಹಿಂದಿನ ಕಲಂ 164 ದಂಡ ಸಂಹಿತೆ, ಈಗಿನ ಕಲಂ 183 ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರಡಿಯಲ್ಲಿ ಸ್ವ ಇಚ್ಛಾ ಹೇಳಿಕೆ ನೀಡಿ ಸೆ.23ರಂದು ವಾಪಾಸಾಗಿದ್ದಾರೆ.

ಈ ಹಿಂದೆ ಆರೋಪಿಯನ್ನು ತೆರೆದ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾಗ ತನಗೆ ನ್ಯಾಯಾಲಯದ ಮುಂದೆ ಹೇಳಲು ತುಂಬಾ ಸಂಗತಿಗಳು ಇವೆ ಎಂದು ನಿವೇದಿಸಿಕೊಂಡ ಹಿನ್ನಲೆಯಲ್ಲಿ ಈ ಹೇಳಿಕೆಯನ್ನು ಪಡೆಯಲಾಗಿದೆ.

ಇವತ್ತು ಆರೋಪಿ ಚಿನ್ನಯ್ಯನನ್ನು ಶಿವಮೊಗ್ಗ ಪೊಲೀಸರು ಬೆಳ್ತಂಗಡಿ ಕೋರ್ಟ್ ಗೆ ಕರೆ ತಂದಿದ್ದರು. ಬೆಳ್ತಂಗಡಿ ತಾಲೂಕು ನ್ಯಾಯಾಲಯದ ಹೆಚ್ಚುವರಿ ವ್ಯಾವಹಾರಿಕ ಮತ್ತು ಪ್ರಥಮ ದರ್ಜೆ ನ್ಯಾಯಾಧೀಶರಾದ ವಿಜಯೇಂದ್ರ ಮುಂದೆ ಹಾಜರಾಗಿ ಹೇಳಿಕೆ ನೀಡಿರುವ ಚಿನ್ನಯ್ಯನನ್ನು ಪೊಲೀಸರು ಶಿವಮೊಗ್ಗ ಜೈಲಿಗೆ ಕರೆದುಕೊಂಡು ಹೋಗಿದ್ದಾರೆ. ಮುಂದೆ ತನಿಖೆ ಹೇಗೆ ಸಾಗುತ್ತದೆ ಎಂದು ಕಾದುನೋಡಬೇಕಿದೆ.

Exit mobile version