ಬೆಳ್ತಂಗಡಿ: ಕಥೋಲಿಕ್ ಸ್ತ್ರೀ ಮಂಡಳಿ ವಲಯ ಸಹಭಾಗಿತ್ವದಲ್ಲಿ ಮೊಂತಿ ಹಬ್ಬ (ತೆನೆ ಹಬ್ಬ)ವನ್ನು ಬೆಳ್ತಂಗಡಿ ಹೋಲಿ ರೆಡಿಮರ್ ಅಡಿಟೋರಿಯಂನಲ್ಲಿ ಸೆ.21ರಂದು ಆಚರಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳ್ತಂಗಡಿ ಚರ್ಚ್ ನ ಪ್ರಧಾನ ಗುರು ಫಾ. ವಾಲ್ಟರ್ ಡಿಮೆಲ್ಲೊ ನೆರವೇರಿಸಿ ಸಂದೇಶ ನೀಡಿದರು.
ವೇದಿಕೆಯಲ್ಲಿ ಕಥೋಲಿಕ್ ಸ್ತ್ರಿ ಮಂಡಳಿ ಬೆಳ್ತಂಗಡಿ ವಲಯ ಅಧ್ಯಕ್ಷೆ ಗ್ರೇಸಿ ಲೋಬೋ ಉಪಸ್ಥಿತರಿದ್ದರು .ಉಜಿರೆ ಚರ್ಚ್ ಆಧ್ಯಾತ್ಮಿಕ ನಿರ್ದೇಶಕ ಫಾ .ಅಬೆಲ್ ಲೋಬೊ ಶುಭ ಸಂದೇಶ ನೀಡಿದರು. DCCW ನಿರ್ದೇಶಕ ಫಾ. ಹೆರಾಲ್ಡ್ ಡಿಸೋಜರವರು ಶುಭ ಸಂದೇಶ ನೀಡಿದರು. ಕಥೋಲಿಕ್ ಸ್ತ್ರೀ ಮಂಡಳಿ ಕಾರ್ಯದರ್ಶಿ ಆಶು ಜುಲಿಟಾ ಕ್ರಾಸ್ತ , DCCW ಕಾರ್ಯದರ್ಶಿ ವೈಲೆಟ್, ಬೆಳ್ತಂಗಡಿ ಕಾನ್ವೆಂಟಿನ ಧರ್ಮಭಗಿನಿ ಸಿ. ಜೆಸಿಂತಾ ಬರೆಟ್ಟೊ ಉಪಸ್ಥಿತರಿದ್ದರು.
ಅಧ್ಯಕ್ಷೆ ಗ್ರೇಸಿ ಲೋಬೊ ಪ್ರಾಸ್ತಾವಿಕ ನುಡಿಯೊಂದಿಗೆ ಸ್ವಾಗತಿಸಿದರು. ವೈಲೆಟ್ ರವರು ಕ್ರಿಶ್ಚಿಯನ್ ಮೈನಾರಿಟಿ ವಿಮೆನ್ಸ್ ಮಲ್ಟಿಪರ್ಪಸ್ ಕೊ-ಆಪರೇಟಿವ್ ಸೊಸೈಟಿ ಇದರ ಬಗ್ಗೆ ಸವಿಸ್ತಾರವಾದ ಮಾಹಿತಿ ನೀಡಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ನಂತರ ಲಕ್ಕಿಡಿಪ್ ಬಹುಮಾನ ವಿತರಣೆ ಹಾಗೂ ಇತರ ಚಟುವಟಿಕೆಗಳು ನಡೆಯಿತು. 400ಕ್ಕೂ ಹೆಚ್ಚು ಕಥೋಲಿಕ್ ಸ್ತ್ರೀಯರು ಹಾಗೂ ಧರ್ಮ ಭಗಿನಿಯರು ಭಾಗಿಯಾಗಿದ್ದರು.
ಪ್ರಮೀಳ ಮತ್ತು ಜೆಸಿಂತಾರವರು ಕಾಯ೯ಕ್ರಮವನ್ನು ನಿರೂಪಿಸಿದರು. ಕಾಯ೯ಕ್ರಮದಲ್ಲಿ ಭಾಗವಹಿಸಿದ ಎಲ್ಲಾರಿಗೂ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು. ಬೆಳ್ತಂಗಡಿ ವಲಯದ ಪ್ರತಿನಿಧಿಯಾದ ಎವ್ಜಿನ್ ಪಿರೇರಾ ವಂದಿಸಿದರು.