Site icon Suddi Belthangady

ಮಕ್ಕಳ ಕುಣಿತ ಭಜನಾ ತಂಡದ ಮಕ್ಕಳಿಗೆ ಸಮವಸ್ತ್ರ, ತಾಳ ವಿತರಣೆ

ಬೆಳ್ತಂಗಡಿ: ತೆಂಕಕಾರಂದೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಗುರು ಸಂದೇಶ್ ಮದ್ದಡ್ಕ ಅವರ ತರಬೇತಿಯಲ್ಲಿ ಕಳೆದ 9 ತಿಂಗಳಿಂದ ತರಬೇತಿ ಪಡೆಯುತ್ತಿರುವ ಸುಮಾರು 30 ಸದಸ್ಯರುಗಳಿರುವ ಈ ತಂಡದ ತಾಲೂಕಿನ ಇತರ ಕಡೆ 10ಕ್ಕೂ ಹೆಚ್ಚು ಭಜನಾ ಕಮ್ಮಟಗಳಲ್ಲಿ ಭಜನಾ ಸೇವೆ ನೀಡುತ್ತಾ ಬಂದಿರುತ್ತಾರೆ.

ಮಕ್ಕಳ ಕುಣಿತ ಭಜನಾತಂಡದ ಮಕ್ಕಳಿಗೆ ವಿವಿಧ ದಾನಿಗಳ, ಹಾಗೂ ಮಕ್ಕಳ ಪೋಷಕರ ಸಹಕಾರ ದಲ್ಲಿ ಸಮವಸ್ತ್ರ ಹಾಗೂ ಭಜನಾ ಮಂಡಳಿಯ ವತಿಯಿಂದ ತಾಳವನ್ನು ವಿಷ್ಣು ಮೂರ್ತಿ ದೇವಸ್ಥಾನದ ಆಡಳಿತ ಮೋಕ್ತೆಸರ ಕೃಷ್ಣ ಸಂಪಿಗೆತ್ತಾಯ ಅವರ ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಸೆ.21ರಂದು ದೇವಾಲಯದ ವಠಾರದಲ್ಲಿ ನೀಡಲಾಯಿತು.

ಶ್ರೀ ವಿಷ್ಣು ಸಂಪಿಗೆತ್ತಾಯ, ಅರ್ಚಕ ಶಂಕರ ನಾರಾಯಣ ಭಟ್, ಜಾತ್ರೋತ್ಸವ ಸಮಿತಿ ಮಾಜಿ ಅಧ್ಯಕ್ಷ ಸಂತೋಷ್ ಹೆಗ್ಡೆ, ಜಾತ್ರೊತ್ಸವ ಸಮಿತಿ ಕಾರ್ಯದರ್ಶಿ ವಿದ್ಯಾನಂದ, ಭಜನಾ ಮಂಡಳಿ ಅಧ್ಯಕ್ಷ ಹೇಮಂತ್ ಗುಂಡೇರಿ, ವರಮಹಾಲಕ್ಷ್ಮಿಪೂಜಾ ಸಮಿತಿ ಅಧ್ಯಕ್ಷೆ ರೂಪಲತಾ, ಭಜನಾ ಮಂಡಳಿ ಸದಸ್ಯರು, ಜಾತ್ರೊತ್ಸವ ಸಮಿತಿ ಸದಸ್ಯರು, ಮಕ್ಕಳ ಪೋಷಕರು ಉಪಸ್ಥಿತರಿದ್ದರು. ಅಶ್ವಿನಿ ಬಂದಂತಹ ಅತಿಥಿ ಗಣ್ಯರನ್ನು ಹಾಗೂ ಸಹಕರಿಸಿದ ಎಲ್ಲರನ್ನು ಸ್ವಾಗತಿಸಿ, ಧನ್ಯವಾದವಿತ್ತರು.

Exit mobile version