ಬೆಳ್ತಂಗಡಿ: ಸೆ. 17ರಂದು ಬಿಜೆಪಿ ಯುವಮೋರ್ಚಾ ಮಂಡಲದಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ 75ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಕಳೆoಜ ನಂದಗೋಕುಲ ಗೋಶಾಲೆಗೆ ರೂ.10.000/- ಧನಸಹಾಯ ಹಾಗೂ ಅಶಕ್ತ ಕುಟುಂಬಗಳಾದ ಕುವೆಟ್ಟು ಗ್ರಾಮದ ನೆರೋಲ್ ಕಟ್ಟೆ ಹೊನ್ನಪ್ಪ ಪೂಜಾರಿ ಹಾಗೂ ಪಡoಗಡಿ ಗ್ರಾಮ ಬರಾಯ ದಿನೇಶ್ ಆಚಾರ್ಯ ಈ ಮನೆಗಳಿಗೆ ಆಹಾರಧಾನ್ಯ ಕಿಟ್ ವಿತರಣೆ ಮಾಡಲಾಯಿತು. ಬಿಜೆಪಿ ಯುವಮೋರ್ಚಾ ಮಂಡಲ ಅಧ್ಯಕ್ಷ ಶಶಿರಾಜ್ ಶೆಟ್ಟಿ ಗುರುವಾಯನಕೆರೆ, ಕುವೆಟ್ಟು ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಪ್ರದೀಪ್, ಪಂಚಾಯತ್ ಸದಸ್ಯೆ ಸುಮಂಗಲ ಪ್ರಭು ಹಾಗೂ ಪ್ರಮುಖರು ಉಪಸ್ಥಿತರಿದ್ದರು.
ಬೆಳ್ತಂಗಡಿ: ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಪ್ರಯುಕ್ತ ಕಳೆಂಜ ನಂದಗೋಕುಲ ಗೋಶಾಲೆಗೆ ಧನಸಹಾಯ ಹಾಗೂ ಆಹಾರಧಾನ್ಯ ಕಿಟ್ ವಿತರಣೆ
