Site icon Suddi Belthangady

ಅ.3-8: ಕೊಪ್ಪದಲ್ಲಿ 45ನೇ ಬೃಹತ್ ದಸರಾ ಯೋಗ ಕಾರ್ಯಕ್ರಮ, ಪೂರ್ವಭಾವಿ ಸಭೆ

ಕೊಪ್ಪ: ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್ ಹಾಗೂ ಶ್ರೀ ಧ.ಗ್ರಾ.ಯೋಜನೆ ಬಿ.ಸಿ. ಟ್ರಸ್ಟ್ ಸಹಯೋಗದಲ್ಲಿ ಕೊಪ್ಪ ತಾಲೂಕಿನ 2000ಕ್ಕಿಂತಲೂ ಅಧಿಕ ಸಾರ್ವಜನಿಕರಿಗೆ ಯೋಗ ಹಾಗೂ ಧ್ಯಾನ ಶಿಬಿರ ಅ.3 ರಿಂದ 8ರ ತನಕ ನಡೆಯಲಿದೆ.

ಕಾರ್ಯಕ್ರಮದ ಬಗ್ಗೆ ಪೂರ್ವಭಾವಿ ಸಭೆಯು ಗ್ರಾಮಾಭಿವೃದ್ಧಿ ಕಚೇರಿಯಲ್ಲಿ ನಡೆಯಿತು. ಸಭೆಯಲ್ಲಿ ಜನಜಾಗೃತಿ ವೇದಿಕೆಯ ಉಪಾಧ್ಯಕ್ಷ ಬಾಲಕೃಷ್ಣ, ದೇವಪ್ಪ, ಯೋಜನಾಧಿಕಾರಿ ರಾಜೇಶ್, ಯೋಗ ಸಂಘಟಕ ಶೇಖರ್, ನಿರ್ದೇಶಕ ಡಾ. ಶಶಿಕಾಂತ್‌ ಜೈನ್ ಉಪಸ್ಥಿತರಿದ್ದು ಶಿಬಿರದ ಮಾಹಿತಿ ಹಾಗೂ ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕು ಎಂದು ತಿಳಿಸಿದರು.

Exit mobile version