Site icon Suddi Belthangady

ಬುರುಡೆ ಪ್ರಕರಣ-ಪ್ರದೀಪ್ ಗೌಡ ಕೋರ್ಟ್ ಗೆ ಹಾಜರು-ಸಾಕ್ಷಿದಾರನಾಗಿ ಹಾಜರುಪಡಿಸಿದ ಎಸ್.ಐ.ಟಿ

ಬೆಳ್ತಂಗಡಿ: ಬುರುಡೆ ಪ್ರಕರಣದಲ್ಲಿ ಬಿಗ್ ಅಪ್ಡೇಟ್ ಹೊರಬಂದಿದೆ. ಸೌಜನ್ಯ ಮಾವ ವಿಠಲ ಗೌಡ ಆಪ್ತ ಪ್ರದೀಪ್ ಕೋರ್ಟ್ ಗೆ ಹಾಜರಾಗಿದ್ದಾರೆ. ಸಾಕ್ಷಿಧಾರನಾಗಿ ಪ್ರದೀಪ್ ಗೌಡರನ್ನು ಬೆಳ್ತಂಗಡಿ ಕೋರ್ಟ್ ಗೆ ಎಸ್. ಐ. ಟಿ. ಯವರು ಹಾಜರುಪಡಿಸಿದ್ದಾರೆ. ಬುರುಡೆ ತರಲು ವಿಠಲ ಗೌಡ ಜೊತೆ ಬಂಗ್ಲೆಗುಡ್ಡ ಕಾಡಿಗೆ ಹೋಗಿದ್ದ ಆರೋಪ ಹೊತ್ತಿದ್ದ ಪ್ರದೀಪ್, ನ್ಯಾಯಧೀಶರ ಮುಂದೆ ಸಾಕ್ಷಿ ಹೇಳಿಕೆ ನೀಡಲಿದ್ದಾರೆ.
ಪ್ರದೀಪ್ ನನ್ನ ಖಾಸಗಿ ಕಾರಿನಲ್ಲಿ ಕರೆತಂದ ಎಸ್ಐಟಿ ಪೊಲೀಸರು ನ್ಯಾಯಾಲಯಕ್ಕೆ ಕರೆದುಕೊಂಡು ಹೋಗಿದ್ದಾರೆ.

Exit mobile version